Webdunia - Bharat's app for daily news and videos

Install App

ಗೆಲ್ಲದ ಸ್ಟಾರ್‌ಗಳ ಚಿತ್ರಗಳು

Webdunia
ಸ್ಟಾರ್‌ಗಳು ಎಂದು ಪರಿಗಣಿಸಿರುವ ನಾಯಕ ನಟರು ಅಭಿನಯಿಸಿದ ಚಿತ್ರಗಳಲ್ಲಿ ಕೆಲವು ಸೋಲುಂಡವು. 2007ರಲ್ಲಿ ಉಪೇಂದ್ರ ನಟಿಸಿದ ಅನಾಥರು ಚಿತ್ರ ಮಾತ್ರ ನಿರ್ಮಾಪಕರಿಗೆ ದುಡ್ಡು ತಂದರೂ ವಿತರಕರು ನಷ್ಟ ಅನುಭವಿಸಿದರು.

ವಿವಾದ ಬೆನ್ನಿಗೆ ಕಟ್ಟಿಕೊಂಡೇ ತಯಾರಾದ ಮಸ್ತಿ, ಪರೋಡಿ, ಶಿವರಾಜಕುಮಾರ್-ಉಪೇಂದ್ರರ ಕಾಂಬಿನೇಷನ್ ಲವಕುಶ ಜಯಗಳಿಸಲಿಲ್ಲ. 2006ರಲ್ಲಿ ಮೈ ಆಟೋಗ್ರಾಫ್ ಮೂಲಕ ನಟ ನಿರ್ದೇಶಕರಾಗಿ ಹೆಸರು ಗಳಿಸಿದ ಸುದೀಪ್ ಅವರ 2007ರ ಶಾಂತಿ ನಿವಾಸ ಚಿತ್ರ ಚೆನ್ನಾಗಿ ಮೂಡಿಬಂದಿದ್ದರೂ ಪ್ರೇಕ್ಷಕ ಮಹಾಶಯ ಅದನ್ನು ಪುರಸ್ಕರಿಸಲಿಲ್ಲ.

ವಿಷ್ಣವರ್ಧನ್, ಶಿವರಾಜಕುಮಾರ್ ಹಾಗೂ ದರ್ಶನ್ ತಲಾ ನಾಲ್ಕು ಚಿತ್ರಗಳಲ್ಲಿ ಕಾಣಿಸಿಕೊಂಡರು. ಶಿವರಾಜ್‌ಕುಮಾರ್ ಅವರ ಸಂತ ಚಿತ್ರ ಸುಮಾರಾಗಿ ಹಣ ಗಳಿಸಿತು. ವಿಷ್ಣುವರ್ಧನ್ ಹಾಗೂ ದರ್ಶನ್ ಮೂರು ಚಿತ್ರಗಳು ಸೋತವು.

ದರ್ಶನ್ ಹಾಗೂ ವಿಷ್ಣುವರ್ಧನ್ ಅಭಿನಯದ ಈ ಬಂಧನಕ್ಕೆ ಪ್ರೇಕ್ಷಕರ ಮನ್ನಣೆ ದೊರೆತಿದ್ದು, 2008ರಲ್ಲೂ ಪ್ರದರ್ಶನ ಮುಂದುವರೆಯುವ ಎಲ್ಲಾ ಸಾಧ್ಯತೆಗಳೂ ಕಂಡುಬರುತ್ತಿವೆ. ಆದರೆ ಪ್ರಮುಖ ನಟರ ಚಿತ್ರಗಳು ಬಿಡುಗಡೆಯಿಂದ ಸೃಷ್ಟಿಯಾಗಿರುವ ಪೈಪೋಟಿಯಿಂದ ಆ ಚಿತ್ರಕ್ಕೆ ಎತ್ತಂಗಡಿಯ ಭೀತಿಯೂ ಕೂಡಾ ಇದೆ. ಪ್ರೇಮ್ ಚಿತ್ರಗಳಲ್ಲಿ ಪಲ್ಲಕ್ಕಿ ಸುಮಾರಾಗಿ ಓಡಿದೆ. ಇನ್ನು ಹೊಸ ಹುಡುಗರ ಚಿತ್ರಗಳು ಪ್ರೇಕ್ಷಕರ ಗಮನ ಸೆಳೆದರೂ ದುಡ್ಡು ಸೆಳೆಯಲಿಲ್ಲ.

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಜ್ವರ ಬಂದು ನಾಲಿಗೆ ರುಚಿ ಕೆಟ್ಟು ಹೋಗಿದ್ದರೆ ಹೀಗೆ ಮಾಡಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

Show comments