Select Your Language

Notifications

webdunia
webdunia
webdunia
webdunia

ನಾನೇ ವಿಶ್ರಾಂತಿ ಬಯಸಿದ್ದೆ; ಊಹಾಪೋಹಗಳಿಗೆ ತೆರೆ ಎಳೆದ ಸೆಹ್ವಾಗ್

ನಾನೇ ವಿಶ್ರಾಂತಿ ಬಯಸಿದ್ದೆ; ಊಹಾಪೋಹಗಳಿಗೆ ತೆರೆ ಎಳೆದ ಸೆಹ್ವಾಗ್
ನವದೆಹಲಿ , ಶುಕ್ರವಾರ, 2 ಮಾರ್ಚ್ 2012 (11:45 IST)
WD
ಹಿರಿಯ ಆಟಗಾರ ವೀರೇಂದ್ರ ಸೆಹ್ವಾಗ್ ಅವರನ್ನು ಏಷ್ಯಾ ಕಪ್‌ಗಾಗಿನ ಟೀಮ್ ಇಂಡಿಯಾದಿಂದ ಕೈಬಿಟ್ಟಿರುವುದು ಹಲವು ಗೊಂದಲಗಳಿಗೆ ಕಾರಣವಾಗಿತ್ತು. ಆದರೆ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿರುವ ಸ್ವತ: ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್, ತಾವೇ ಆಯ್ಕೆ ಸಮಿತಿಯಲ್ಲಿ ವಿಶ್ರಾಂತಿ ಬಯಸಿರುವುದಾಗಿ ತಿಳಿಸಿದ್ದಾರೆ.

ಕಳಪೆ ಫಾರ್ಮ್‌ನಲ್ಲಿರುವ ಸೆಹ್ವಾಗ್ ಅವರನ್ನು ವಿಶ್ರಾಂತಿ ನೆಪದಲ್ಲಿ ತಂಡದಿಂದ ಹೊರದಬ್ಬಲಾಗಿದೆ ಎಂಬ ವರದಿಗಳು ಹಬ್ಬಿದ್ದವು. ಆದರೆ ತಮ್ಮ ಭುಜ ನೋವಿನ ಸಮಸ್ಯೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಹಾಗಾಗಿ ನಾನೇ ವಿಶ್ರಾಂತಿ ಬಯಸಿದ್ದೇನೆ ಎಂದಿದ್ದಾರೆ.

ನನಗೆ ಅಲ್ಪ ವಿಶ್ರಾಂತಿಯ ಅಗತ್ಯವಿದೆ. ಫಿಟ್ನೆಸ್ ವಿಚಾರದಲ್ಲಿ ಟೀಮ್ ಮ್ಯಾನೇಜ್‌ಮೆಂಟನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿಲ್ಲ. ನನ್ನ ಗಾಯದ ಸಮಸ್ಯೆ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ ಎಂದರು.

ನಾನು ಯಾವತ್ತೂ ಕೂಡಾ ನನ್ನ ಗಾಯ ಅಥವಾ ಫಿಟ್ನೆಸ್ ಸಮಸ್ಯೆಯನ್ನು ಅಡಗಿಸಿಟ್ಟಿಲ್ಲ. ಈ ಹಿಂದೆ ಕೋಚ್ ಗ್ಯಾರಿ ಕರ್ಸ್ಟನ್ ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಸಮೀಪಿಸಿದ ನಂತರವಷ್ಟೇ ಭುಜ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು ಎಂದರು.

Share this Story:

Follow Webdunia kannada