Select Your Language

Notifications

webdunia
webdunia
webdunia
webdunia

ಭಾರತೀಯರಿಗೆ ವಿಶಾಲ ಹೃದಯವಿಲ್ಲ: ಆಫ್ರಿದಿ ಕೆಂಡಾಮಂಡಲ

ಭಾರತೀಯರಿಗೆ ವಿಶಾಲ ಹೃದಯವಿಲ್ಲ: ಆಫ್ರಿದಿ ಕೆಂಡಾಮಂಡಲ
ಇಸ್ಲಾಮಾಬಾದ್ , ಸೋಮವಾರ, 4 ಏಪ್ರಿಲ್ 2011 (17:51 IST)
PTI
ಇತ್ತೀಚೆಗಷ್ಟೇ ತಮ್ಮ ಹೇಳಿಕೆಯ ಮೂಲಕ ಅಸಂಖ್ಯಾತ ಭಾರತೀಯ ಅಭಿಮಾನಿಗಳ ಮನಗೆದ್ದಿದ್ದ ಪಾಕಿಸ್ತಾನ ನಾಯಕ ಶಾಹಿದ್ ಆಫ್ರಿದಿ ತವರಿಗೆ ಹೋದ ಬಳಿಕ ತಮ್ಮ ಹಳೆ ಕ್ಯಾತೆ ತೆಗೆದಿದ್ದಾರೆ.

'ಏನೇ ಮಾಡಿದರೂ ನಾಯಿ ಬಾಲ ಡೊಂಕೇ' ಎನ್ನುವ ಗಾದೆ ಮಾತು ಪಾಕಿಸ್ತಾನ ನಾಯಕ ಶಾಹಿದ್ ಆಫ್ರಿದಿಗೆ ಸರಿಯಾಗಿ ಒಪ್ಪುತ್ತದೆ. ಭಾರತದ ವಿರುದ್ಧದ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಎದುರಾದ ಸೋಲಿನ ನಂತರ ಇದೀಗ ಪಾಕಿಸ್ತಾನದಲ್ಲಿ ಹೇಳಿಕೆ ನೀಡಿರುವ ಪಾಕಿಸ್ತಾನದ ನಾಯಕ ಆಫ್ರಿದಿ, ಭಾರತೀಯರಿಗೆ ವಿಶಾಲ ಹೃದಯವಿಲ್ಲ ಎಂದು ಕಿಡಿ ಕಾರಿದ್ದಾರೆ.

ಇದೇ ಸಂದರ್ಭದಲ್ಲಿ ಭಾರತೀಯ ಮಾಧ್ಯಮದವರನ್ನು ತೀವ್ರ ಟೀಕೆಗೆ ಗುರಿ ಮಾಡಿರುವ ಆಫ್ರಿದಿ, ಭಾರತಕ್ಕೆ ಹೋಲಿಸಿದರೆ ನಮ್ಮ ಮಾಧ್ಯಮವವು ನೂರು ಪಟ್ಟು ಉತ್ತಮವಾಗಿದೆ ಎಂದಿದ್ದಾರೆ.

ನಿಜ ಹೇಳಬೇಕೆಂದರೆ ಭಾರತೀಯರು ನಮ್ಮ ಪಾಕಿಸ್ತಾನದ ಹಾಗೆ ವಿಶಾಲ ಹೃದಯಿಗಳಲ್ಲ. ಅಲ್ಲಾಹು ನಮಗೆ ನೀಡಿದಂತಹ ವಿಶಾಲ ಹೃದಯವನ್ನು ಭಾರತತೀಯರು ಹೊಂದಿಲ್ಲ ಎಂದವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

ಭಾರತೀಯರ ಜತೆ ಬೆರೆಯುವುದು ಕಷ್ಟ. ಮಾತುಕತೆಯಲ್ಲಿ ಯಾವುದೇ ಪ್ರಯೋಜನವಿಲ್ಲ. ನೀವೇ ನೋಡಿ ಕಳೆದ 60 ವರ್ಷಗಳಲ್ಲಿ ಎಷ್ಟು ಉತ್ತಮವಾಗಿ ಸಾಗಿತ್ತೋ ಅಷ್ಟೇ ಹದೆಗೆಟ್ಟಿದೆ ಎಂದವರು ಉಭಯ ದೇಶಗಳ ಸಂಬಂಧದ ಬಗ್ಗೆ ಮಾತನಾಡಿದರು.

ಅಲ್ಲಿನ ಮಾಧ್ಯಮಗಳು ಭಾರತ-ಪಾಕ್ ಪಂದ್ಯವನ್ನು ನಗೆಟಿವ್ ಆಗಿ ತೋರಿಸುತ್ತಿದ್ದವು. ಜನರು ಇದನ್ನು ಬಯಸದಿದ್ದರೂ ಅಲ್ಲಿನ ಮಾಧ್ಯಮಗಳು ಉಭಯ ದೇಶಗಳ ಬಾಂಧವ್ಯವನ್ನು ಹದೆಗೆಡಿಸುತ್ತಿವೆ ಎಂದವರು ಗುಡಿಗಿದರು.

ಭಾರತದ ಜತೆ ಸ್ನೇಹ ಹಸ್ತ ಚಾಚೋದ್ರಲ್ಲಿ ಅರ್ಥವೇ ಇಲ್ಲ. ನಾವು ಎಷ್ಟೇ ಕೈಜೋಡಿಸಿದರೂ ಅಥವಾ ಪ್ರಯತ್ನಪಟ್ಟರೂ ಎಲ್ಲವೂ ವಿಫಲವಾಗಲಿದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದರು.

Share this Story:

Follow Webdunia kannada