Select Your Language

Notifications

webdunia
webdunia
webdunia
webdunia

ಟೀಮ್ ಇಂಡಿಯಾಕ್ಕೆ ರಾಷ್ಟ್ರಪತಿ ಪಾಟೀಲ್ ಸನ್ಮಾನ

ಟೀಮ್ ಇಂಡಿಯಾಕ್ಕೆ ರಾಷ್ಟ್ರಪತಿ ಪಾಟೀಲ್ ಸನ್ಮಾನ
ಮುಂಬೈ , ಸೋಮವಾರ, 4 ಏಪ್ರಿಲ್ 2011 (12:06 IST)
ದೇಶದ ಶತಕೋಟಿ ಅಭಿಮಾನಿಗಳ ಕನಸನ್ನು ನನಸಾಗಿಸುವ ಮೂಲಕ ಮನಗೆದ್ದಿದ್ದ ಟೀಮಾ ಇಂಡಿಯಾ ಆಟಗಾರರಿಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಭಿನಂಧನೆ ಸಲ್ಲಿಸಿದ್ದಾರೆ.

ಮುಂಬೈನ ರಾಜಭವನದಲ್ಲಿ ಏರ್ಪಡಿಸಿದ್ದ ಟೀ ಪಾರ್ಟಿ ಸಮಾರಂಭದಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರರನ್ನು ಆಹ್ವಾನಿಸಿದ್ದ ರಾಷ್ಟ್ರಪತಿಯವರು ಸನ್ಮಾನಿಸಿದರು.

ಸಮಾರಂಭದಲ್ಲಿ ಪ್ರತಿಭಾ ಪಾಟೀಲ್ ಪತಿ ದೇವಿಸಿಂಗ್ ಶೇಖಾವತ್, ಮಹಾರಾಷ್ಟ್ರ ರಾಜ್ಯಪಾಲ ಕೆ. ಶಂಕರನಾರಾಯಣ, ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್, ಐಸಿಸಿ ಅಧ್ಯಕ್ಷ ಶರದ್ ಸಹಿತ ಹಲವು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪೃಥಿರಾಜ್ ಚವಾಣ್, ಭಾರತದ ಗೆಲುವಿನಲ್ಲಿ ಭಾಗಿಯಾಗಿದ್ದ ಸಚಿನ್ ತೆಂಡೂಲ್ಕರ್ ಮತ್ತು ಜಹೀರ್ ಖಾನ್ ಅವರಿಗೆ ತಲಾ ಒಂದು ಕೋಟಿ ರೂಪಾಯಿ ನಗದು ಬಹುಮಾನ ನೀಡುವುದಾಗಿ ಪ್ರಕಟಿಸಿದರು.

ಇದಕ್ಕೂ ಮೊದಲು ಟೀಮಾ ಇಂಡಿಯಾ ಆಟಗಾರರು ಗೇಟ್ ವೇ ಆಫ್ ಇಂಡಿಯಾ ಬಳಿ ವಿಶ್ವಕಪ್ ಟ್ರೋಫಿಯೊಂದಿಗೆ ಫೋಟೋಗೆ ಫೋಸ್ ನೀಡಿದರು.

Share this Story:

Follow Webdunia kannada