Webdunia - Bharat's app for daily news and videos

Install App

ವಿಶ್ವಕಪ್ ಗೆಲುವನ್ನು ದೇಶಕ್ಕೆ ಸಮರ್ಪಿಸಿದ ಲಿಟ್ಲ್ ಮಾಸ್ಟರ್

Webdunia
ಸೋಮವಾರ, 4 ಏಪ್ರಿಲ್ 2011 (10:11 IST)
WD


ವಿಶ್ವಕಪ್ ಗೆಲುವನ್ನು ತನ್ನ ಜೀವನದ ಅತಿ ಶ್ರೇಷ್ಠ ಕ್ಷಣ ಎಂದು ಬಿಂಬಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಕ್ರಿಕೆಟನ್ನು ತಮ್ಮ ಧರ್ಮವಾಗಿ ಪರಿಗಣಿಸಿರುವ ಇಡೀ ದೇಶದ ಜನತೆಗೆ ಗೆಲುವನ್ನು ಸಮರ್ಪಿಸಿದ್ದಾರೆ.

ಸಚಿನ್ ಈ ಐತಿಹಾಸಿಕ ಕ್ಷಣಕ್ಕಾಗಿ ಕಳೆದ 21 ವರ್ಷಗಳಿಂದ ಕಾಯುತ್ತಿದ್ದರು. ಕೊನೆಗೂ ಸಚಿನ್‌ಗಾಗಿ ವಿಶ್ವಕಪ್ ಗೆಲ್ಲಿಸಿಕೊಡಲಿದ್ದೇವೆಂಬ ಸಹ ಆಟಗಾರರ ವಾಗ್ದಾನವು ನಿಜವೆನಿಸಿತು.

ವಿಶ್ವಕಪ್ ಗೆಲುವನ್ನು ವರ್ಣಿಸಲು ಮಾತುಗಳೇ ಸಿಗುತ್ತಿಲ್ಲ. ಕಳೆದ 21 ವರ್ಷಗಳಿಂದ ನಾನು ಈ ಸ್ಮರಣೀಯ ನಿಮಿಷಕ್ಕಾಗಿ ಕಾಯುತ್ತಿದ್ದೆ. ನಿಜಕ್ಕೂ ಇದು ವಿಶೇಷವಾದದ್ದು ಎಂದು ಸಚಿನ್ ಸೇರಿಸಿದರು.

ಇದು ಕೇವಲ 15 ಮಂದಿಯ ತಂಡದ ಸದಸ್ಯರಿಗೆ ಸೇರಿದ್ದಲ್ಲ. ಇಡೀ ದೇಶಕ್ಕೆ ಈ ಪ್ರಶಸ್ತಿಯ ಗರಿ ಸೇರಿದ್ದಾಗಿದೆ. ಹಾಗಾಗಿ ಈ ಗೆಲುವಿನ ಸಿಹಿ ಎಲ್ಲರೂ ಅನುಭವಿಸುವ ಭರವಸೆ ನನ್ನಲ್ಲಿದೆ ಎಂದರು.

ವಿಶ್ವಕಪ್ ಗೆಲುವು ನನ್ನ ಅತಿ ದೊಡ್ಡ ಕನಸಾಗಿತ್ತು. ಹೀಗಾಗಿ ನನ್ನ ಕನಸನ್ನು ಹಿಂಬಾಲಿಸುತ್ತಾ ಇಲ್ಲಿಯ ವರೆಗೆ ಬಂದಿದ್ದೇನೆ. ದೇಶಕ್ಕಾಗಿ ಈ ವಿಶ್ವಕಪ್ ಗೆಲ್ಲಲು ತಂಡಕ್ಕೆ ಸಾಧ್ಯವಾಗಿದೆ ಎಂದರು.

ಇದೀಗ ಸಾರ್ವಜನಿಕರ ಪ್ರತಿಕ್ರಿಯೆ ಹೇಗಿರಬಹುದೆಂಬುದನ್ನು ಅರಿಯಲು ನಾನು ಕಾತರದಿಂದ ಕಾಯುತ್ತಿದ್ದೇನೆ. ಅವರ ಸಮೀಪ ತೆರಳಿಯೇ ಇದನ್ನು ಅನುಭವಿಸಬೇಕು. ಯಾಕೆಂದರೆ ಅವರ ಪ್ರಾರ್ಥನೆಯಿಂದಲೇ ಈ ಕಪ್ ಗೆಲ್ಲಲು ಸಾಧ್ಯವಾಗಿದೆ ಎಂದರು.

ಮಾತು ಮುಂದುವರಿಸಿದ್ದ ಮುಂಬೈಕರ್, ಕ್ರಿಕೆಟನ್ನು ಆನಂದಿಸಿ ಆಡಲು ಸಾಧ್ಯವಾಗುವಷ್ಟು ಸಮಯ ಕ್ರಿಕೆಟ್‌ನಲ್ಲಿ ಮುಂದುವರಿಯುವುದಾಗಿ ತಿಳಿಸಿದರು.

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

Show comments