ವಿಶ್ವದ ಅಸಂಖ್ಯಾತ ಅಭಿಮಾನಿಗಳು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ನ ದೇವರು ಎಂದೇ ಪರಿಗಣಿಸುತ್ತಾರೆ. ಭಾರತದ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡಾ ಇದರಿಂದ ಹೊರತಾಗಿಲ್ಲ. ಕ್ರಿಕೆಟ್ ಆಡುವುದಕ್ಕಾಗಿಯೇ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ರನ್ನು ದೇವರು ಸೃಷ್ಟಿ ಮಾಡಿದ್ದಾರೆ ಎಂದು ಭಾರತೀಯ ನಾಯಕ ಅಭಿಪ್ರಾಯಪಟ್ಟಿದ್ದಾರೆ.
ದಾಖಲೆಯ ಆರನೇ ಬಾರಿಗೆ ಸಚಿನ್ ವಿಶ್ವಕಪ್ ಆಡುತ್ತಿದ್ದಾರೆ. ಹಾಗೆಯೇ ತವರೂರಾದ ವಾಂಖೆಡೆ ಮೈದಾನದಲ್ಲಿ ವಿಶ್ವಕಪ್ ಪ್ರಶಸ್ತಿ ಎತ್ತಿಹಿಡಿಯುವ ಭರವಸೆಯಲ್ಲಿದ್ದಾರೆ.
ಕ್ರಿಕೆಟ್ ಆಡಲಿಕ್ಕಾಗಿಯೇ ಸಚಿನ್ ಹುಟ್ಟಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೊದಲ ಎಸೆತ ಎದುರಿಸಿದ ದಿನದಿಂದಲೇ ಶೇಕಡಾ 100ರಷ್ಟು ಅಪರ್ಣಾ ಮನೋಭಾವದಿಂದ ಸಚಿನ್ ಆಡಿದ್ದಾರೆ. ಈ ಸುದೀರ್ಘವಾದ ಅವಧಿಯಲ್ಲಿ ಅನೇಕ ಆಟಗಾರರು ಬಂದು ಹೋದರು. ಆದರೆ ಸಚಿನ್ ಮಾತ್ರ ಮತ್ತಷ್ಟು ಪ್ರಬಲರಾಗಿ ಸಾಗುತ್ತಿದ್ದಾರೆ ಎಂದು ನಾಯಕ ವಿವರಿಸಿದರು.
37 ಹರೆಯದ ಸಚಿನ್ ಶತಕಗಳ ಶತಕ ಮಾಡಲು ಇನ್ನು ಒಂದು ಶತಕದ ಅಗತ್ಯವಿದೆ. ಫೈನಲ್ನಲ್ಲಿ ಇದು ದಾಖಲಾದ್ದಲ್ಲಿ ಅಂದೊಂದು ಅವಿಸ್ಮರಣೀಯ ಕ್ಷಣವಾಗಿರಲಿದೆ ಎಂದು ನಾಯಕ ಅಭಿಪ್ರಾಯಪಟ್ಟರು.
ಸಚಿನ್ ಶತಕ ಬಾರಿಸಲಿ ಅಥವಾ ಬಾರಿಸದಿರಲಿ; ಆದರೆ ಒಬ್ಬ ಕ್ರಿಕೆಟಿಗ ಕನಸು ಕಾಣುವುದಕ್ಕಿತಂಲೂ ಹೆಚ್ಚು ಸಚಿನ್ ಸಾಧನೆ ಮಾಡಿದ್ದಾರೆ ಎಂದವರು ಹೇಳಿದರು.