Webdunia - Bharat's app for daily news and videos

Install App

ಕಸಬ್, ಅಫ್ಜಲ್‌ಗ್ಯಾಕೆ ಟಿಕೆಟ್ ನೀಡಿಲ್ಲ: ಠಾಕ್ರೆ ವ್ಯಂಗ್ಯ

Webdunia
ಸೋಮವಾರ, 28 ಮಾರ್ಚ್ 2011 (14:49 IST)
PTI
ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಹೈ ವೋಲ್ಟೇಜ್ ಸೆಮಿಫೈನಲ್ ಪಂದ್ಯಕ್ಕಾಗಿ ವೇದಿಕೆ ಸಿದ್ಧಗೊಂಡಿದೆ. ಅತ್ತ ಇದನ್ನೇ ಸದವಕಾಶವಾಗಿ ಪರಿಗಣಿಸಿರುವ ಭಾರತೀಯ ಸರಕಾರವು ಶಾಂತಿ ಮರು ಸ್ಥಾಪಿಸುವ ನಿಟ್ಟಿನಲ್ಲಿ ಪಂದ್ಯ ವೀಕ್ಷಿಸಲು ಪಾಕಿಸ್ತಾನ ಅಧ್ಯಕ್ಷ ಮತ್ತು ಪ್ರಧಾನಿಗೆ ಆಹ್ವಾನ ನೀಡಿದೆ.

ಆದರೆ ಪ್ರಧಾನಿ ಮನಮೋಹನ್ ಸಿಂಗ್ ರಾಜಕೀಯ ನಿಲುವನ್ನು ತೀವ್ರ ಟೀಕೆಗೆ ಗುರಿಯಾಗಿಸಿರುವ ಶಿವಸೇನೆ ಮುಖ್ಯಸ್ಥ ಬಾಳ್ ಠಾಕ್ರೆ, 26/11 ದಾಳಿ ರೂವಾರಿ ಉಗ್ರ ಕಸಬ್ ಮತ್ತು ಸಂಸತ್ ದಾಳಿಕೋರ ಅಫ್ಜಲ್ ಗುರು ಅವರಿಗ್ಯಾಕೆ ಟಿಕೆಟ್ ನೀಡಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.

ಮುಂಬೈ ದಾಳಿಯ ನಂತರ ಭಾರತದಲ್ಲಿ ಇದೇ ಮೊದಲ ಬಾರಿಗೆ ಪಾಕ್ ಕ್ರಿಕೆಟ್ ಪಂದ್ಯವೊಂದು ಆಡುತ್ತಿದೆ. ಇದೀಗಲೇ ವಿಶ್ವಕಪ್‌ನ ಸೆಮಿಫೈನಲ್ ಪಂದ್ಯ ವೀಕ್ಷಣೆಗಾಗಿ ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹಾಗೂ ಪ್ರಧಾನ ಮಂತ್ರಿ ಯೂಸುಫ್ ರಾಜಾ ಗಿಲಾನಿ ಅವರಿಗೆ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಆಹ್ವಾನ ನೀಡಿದ್ದಾರೆ.

ಇದೀಗ ತಮ್ಮ ಮುಖ ಪತ್ರಿಕೆ ಸಾಮ್ನಾದಲ್ಲಿ ಪ್ರಧಾನಿ ನಿಲುವನ್ನು ಖಂಡಿಸಿರುವ ಠಾಕ್ರೆ, ಯೂಸುಫ್, ಗಿಲಾನಿಗೆ ಟಿಕೆಟ್ ನೀಡುವ ಮೂಲಕ ಅಫ್ಜಲ್ ಮತ್ತು ಕಸಬ್‌ ಮೇಲೆ ಅನ್ಯಾಯ ಮಾಡಲಾಗಿದೆ ಎಂದು ಬರೆದಿದ್ದಾರೆ.

ಹಿಂದಿನಿಂದಲೂ ಶಾಂತಿಯ ಹೆಸರಲ್ಲಿ ಕ್ರಿಕೆಟ್ ಆಟ ನೋಡಲು ಪಾಕ್ ನಾಯಕರನ್ನು ಬರಮಾಡಿಕೊಳ್ಳಲಾಗುತ್ತಿದೆ. ಆದರೆ ಸಮಸ್ಯೆಗಳನು ಇಲ್ಲಿಗೆ ಇತ್ಯರ್ಥ್ಯವಾಗುವುದಿಲ್ಲ. ಭಾರತದ ಮೇಲೆ ಭಯೋತ್ಪಾದಕರ ದಾಳಿ ಮುಂದುವರಿಯುತ್ತಲೇ ಇವೆ ಎಂದು ಠಾಕ್ರೆ ಹೇಳಿದರು.

ಶತ್ರು ರಾಷ್ಟ್ರಗಳ ವಿರುದ್ಧ ಕಠಿಣ ನಿಲುವು ತೋರುವ ಬದಲು ಪ್ರಧಾನಿ ಮನಮೋಹನ್ ಸಿಂಗ್ ಖುದ್ದಾಗಿ, ಭಯೋತ್ಪಾದಕರಿಂದ ಉಂಟಾಗಿರುವ ಗಾಯಕ್ಕೆ ಉಪ್ಪು ಎರಚುತ್ತಿದ್ದಾರೆ ಎಂದು ಠಾಕ್ರೆ ಆಪಾದಿಸಿದರು.
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Video: ಅವ್ನೀತ್ ಕೌರ್ ಫೋಟೋ ಲೈಕ್ ಮಾಡಿದ್ದ ಕೊಹ್ಲಿ, ಪೂಸಿ ಹೊಡೆದರೂ ಅನುಷ್ಕಾ ಕರಗುತ್ತಿಲ್ವಂತೆ

Team India: ಕೊಹ್ಲಿ ಅಲ್ಲ, ಬುಮ್ರಾ ಅಲ್ಲ ಟೀಂ ಇಂಡಿಯಾ ಹೊಸ ಕ್ಯಾಪ್ಟನ್ ಇವರೇ

ರೋಹಿತ್ ಶರ್ಮಾ ಬೆನ್ನಲ್ಲೇ ಟೆಸ್ಟ್‌ಗೆ ಗುಡ್‌ಬೈ ಹೇಳಲು ಬಯಸಿದ್ದ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿ

IPL 2025: ಮುಂದಿನ ಐಪಿಎಲ್ ಪಂದ್ಯಾಟ ನಡೆಯಲು ಐಡಿಯಾ ಕೊಟ್ಟ ಕ್ರಿಕೆಟಿಗ ಮೈಕೆಲ್ ವಾಘನ್

Rohit Sharma: ಈ ಸಂದರ್ಭದಲ್ಲಿ ಪ್ರತಿಯೊಬ್ಬನು ಜವಾಬ್ದಾರಿಯುತವಾಗಿರಬೇಕು: ರೋಹಿತ್ ಶರ್ಮಾ

Show comments