Select Your Language

Notifications

webdunia
webdunia
webdunia
webdunia

ಮರು ಹರಾಜಿನಲ್ಲೂ ಯಾರಿಗೂ ಬೇಡವಾದ ದಾದಾ

ಮರು ಹರಾಜಿನಲ್ಲೂ ಯಾರಿಗೂ ಬೇಡವಾದ ದಾದಾ
ಬೆಂಗಳೂರು , ಸೋಮವಾರ, 10 ಜನವರಿ 2011 (16:33 IST)
ನಾಲ್ಕನೇ ಆವೃತ್ತಿಗಾಗಿ ನಡೆದ ಹರಾಜಿನಲ್ಲಿ ಭಾರತದ ಮಾಜಿ ಯಶಸ್ವಿ ನಾಯಕ ಸೌರವ್ ಗಂಗೂಲಿ ಅವರನ್ನುಕೇಳುವವರೇ ಇಲ್ಲದಂತಾಗಿದೆ. ಕಳೆದ ಮೂರು ಆವೃತ್ತಿಗಳಲ್ಲಿ ಕೊಲ್ಕತ್ತಾ ತಂಡದ ನಾಯಕತ್ವ ವಹಿಸಿದ್ದ ಗಂಗೂಲಿ ಅವರನ್ನು ನಾಲ್ಕನೇ ಆವೃತ್ತಿಗಾಗಿನ ಹರಾಜಿನಲ್ಲಿ ಯಾವುದೇ ಫ್ರಾಂಚೈಸಿಗಳು ಖರೀದಿಸದಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಹರಾಜಿನಲ್ಲಿ ಗಂಗೂಲಿ ಅವರಿಗೆ 4 ಲಕ್ಷ ಡಾಲರ್ ಮೂಲಧನ ನಿಗದಿಪಡಿಸಲಾಗಿತ್ತು. ಆದರೆ ಮೊದಲ ದಿನ ಬಿಕಾರಿಯಾಗದೇ ಉಳಿದಿದ್ದರು. ಇದರಿಂದಾಗಿ ಎರಡನೇ ದಿನ ಭಾನುವಾರದಂದು ಮರು ಹರಾಜು ಬಯಿಸಿದವರ 28 ಆಟಗಾರರ ಪೈಕಿ ಗಂಗೂಲಿ ಕೂಡಾ ಒಬ್ಬರಾಗಿದ್ದರು. ಆದರೆ ಫ್ರಾಂಚೈಸಿಗಳು ಮಾತ್ರ ಗಂಗೂಲಿ ಅವರನ್ನು ಖರೀದಿಸಲು ಹಿಂದೇಟು ಹಾಕಿವೆ.

ಹರಾಜು ಸಂದರ್ಭದಲ್ಲಿ ಶಾರೂಕ್ ಖಾನ್ ಮಾಲಿಕತ್ವದ ಕೊಲ್ಕತ್ತಾ ಬಳಿ 4,20,000 ಡಾಲರ್ ಇದ್ದರೂ ಗಂಗೂಲಿ ಅವರನ್ನು ಉಳಿಸಿಕೊಳ್ಳಲು ಮನಸ್ಸು ತೋರಲಿಲ್ಲ. ಅದೇ ರೀತಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪುಣೆ ತಂಡಗಳು ಗಂಗೂಲಿ ಅವರನ್ನು ಕಡೆಗಣಿಸಿದೆ.

ಮರು ಹರಾಜು ನಡೆಸಿದವರ ಪೈಕಿ ಮುರಳಿ ಕಾರ್ತಿಕ್ 1.84 ಕೋಟಿ ರೂಪಾಯಿಗಳಿಗೆ ಹರಾಜಾದರು. ಹಾಗೆಯೇ ಮೊಹಮ್ಮದ್ ಕೈಫ್ ಅವರನ್ನು ವಿಜಯ್ ಮಲ್ಯ ಮಾಲಿಕತ್ವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 1,30,000 ಡಾಲರ್ ಮೊತ್ತಕ್ಕೆ ಖರೀದಿಸಿತ್ತು.

ಅದೇ ಹೊತ್ತಿಗೆ ಗಂಗೂಲಿ ಅವರು ತಂಡದ ಮಾರ್ಗದರ್ಶಿಯಾಗಿ ಮುಂದುವರಿಯಲು ಕೊಲ್ಕತ್ತಾ ತಂಡ ಬಯಸಿದೆ. ಆದರೆ ಗಂಗೂಲಿ ಇದನ್ನು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮತ್ತೊಂದೆಡೆ ಗಂಗೂಲಿ ಖರೀದಿಸದ ಕೊಲ್ಕತ್ತಾ ಫ್ರಾಂಚೈಸಿ ನಿಲುವನ್ನು ಖಂಡಿಸಿ ಗಂಗೂಲಿ ಅಭಿಮಾನಿಗಳು ನಟ ಶಾರೂಕ್ ಖಾನ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

Share this Story:

Follow Webdunia kannada