Select Your Language

Notifications

webdunia
webdunia
webdunia
webdunia

ರಣಜಿ: ಉತ್ತಮ ಆಟದ ನಿರೀಕ್ಷೆಯಲ್ಲಿ ದ್ರಾವಿಡ್

ರಣಜಿ: ಉತ್ತಮ ಆಟದ ನಿರೀಕ್ಷೆಯಲ್ಲಿ ದ್ರಾವಿಡ್
ಬೆಂಗಳೂರು , ಭಾನುವಾರ, 16 ನವೆಂಬರ್ 2008 (16:42 IST)
ಸುದೀರ್ಘ ಕಾಲ ಕಳಪೆ ಪ್ರದರ್ಶನದಿಂದ ಆಯ್ಕೆದಾರರ ವಕ್ರದೃಷ್ಟಿಗೆ ಬಿದ್ದಿರುವ ರಾಹುಲ್ ದ್ರಾವಿಡ್ ಆಂಧ್ರಪ್ರದೇಶದ ವಿರುದ್ಧ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕದ ಪರ ಫಾರಂಗೆ ಮರಳುವ ಆಶಯ ಹೊಂದಿದ್ದಾರೆ.

ಭಾನುವಾರ ಮೈಸೂರಿನಲ್ಲಿ ಆರಂಭಗೊಂಡಿರುವ ಗ್ರೂಪ್ ಬಿ ಪಂದ್ಯದಲ್ಲಿ ಭಾರತದ ನಾಯಕ ಆಡಲಿದ್ದಾರೆಂದು ತಂಡದ ಅಧಿಕಾರಿಗಳು ತಿಳಿಸಿದರು. ಕೆಲವು ತಿಂಗಳಿಂದ ಅಗ್ರ ಶ್ರೇಯಾಂಕದ ಆಟಗಾರ ಸತ್ವರಹಿತ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದು, ದ್ರಾವಿಡ್ ಉತ್ತಮ ಆಟವನ್ನು ಪ್ರದರ್ಶಿಸುವ ನಿರೀಕ್ಷೆಯಲ್ಲಿದ್ದಾರೆ.

ಕಳೆದ 7 ಟೆಸ್ಟ್ ಪಂದ್ಯಗಳಲ್ಲಿ ಕೇವಲ 268 ರನ್‌ಗಳನ್ನು ಗಳಿಸಲು ದ್ರಾವಿಡ್ ಶಕ್ತರಾಗಿದ್ದಾರೆ. ಕರ್ನಾಟಕ ತಂಡಕ್ಕೆ ರಾಬಿನ್ ಉತ್ತಪ್ಪ ನಾಯಕತ್ವ ವಹಿಸಲಿದ್ದಾರೆ.

Share this Story:

Follow Webdunia kannada