Select Your Language

Notifications

webdunia
webdunia
webdunia
webdunia

ನಿತೀಶ್ ಪ್ರಧಾನಿಯಾಗುವ ಆಸೆಯೇ ಎನ್‌ಡಿಎ ಮೈತ್ರಿ ಕಡಿತಕ್ಕೆ ಕಾರಣ: ಮೋದಿ

ನಿತೀಶ್ ಪ್ರಧಾನಿಯಾಗುವ ಆಸೆಯೇ ಎನ್‌ಡಿಎ ಮೈತ್ರಿ ಕಡಿತಕ್ಕೆ ಕಾರಣ: ಮೋದಿ
, ಶುಕ್ರವಾರ, 14 ಮಾರ್ಚ್ 2014 (17:14 IST)
PR
ಕೆಲವು ದಿನಗಳ ಹಿಂದೆಯಷ್ಟೇ ನನಗೆ ಈ ಮೈತ್ರಿ ಯಾಕೆ ಮುರಿದು ಬಿತ್ತು ಎಂಬುದಕ್ಕೆ ಕಾರಣ ತಿಳಿಯಿತು. ಪ್ರಧಾನಿಯಾಗಬೇಕೆಂಬ ಅವರ ಆಸೆ ಅವರ ನಿದ್ದೆ ಕದ್ದಿತ್ತು. ಅವರಿಗೆ ನಾನೇ ಮೇಲು ಎಂಬ ಅಹಂ ಇದೆ. ಅವರ ದುರಹಂಕಾರ ಎವರೆಸ್ಟ್ ಶಿಖರಕ್ಕಿಂತಲೂ ಎತ್ತರವಾಗಿದೆ. ತಾನಿಲ್ಲಗೇ ಇದ್ದರೆ ಯಾವುದೂ ಸಾಧ್ಯವಾಗಲ್ಲ ಎಂಬುದು ಭಾವನೆ ಎಂದು ಮೋದಿ ಪರೋಕ್ಷವಾಗಿ ನಿತೀಶ್ ಕುಮಾರ್ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.

ಅವರ ದುರಹಂಕಾರ ಎವರೆಸ್ಟ್‌ಗಿಂತ ಹೆಚ್ಚು ಎತ್ತರ, ಪ್ರಧಾನಿ ಸ್ಥಾನಕ್ಕೆ ಅವರಿಗಿಂತ ಯೋಗ್ಯವಾದ ವ್ಯಕ್ತಿ ಬೇರೆ ಯಾರೂ ಇಲ್ಲ ಎಂಬುದು ಅವರ ಭಾವನೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಬಿಹಾರದ ಪುರ್ಣಿಯಾದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಬಿಜೆಪಿ- ಜೆಡಿಯು ನಡುವಿನ ಸಂಬಂಧ ಯಾಕೆ ಮುರಿಯಿತು? ಎಂಬುದರ ಬಗ್ಗೆ ನಾನು ಯೋಚಿಸುತ್ತಿದ್ದೆ. ಕೆಲವರು ದುರಂಹಕಾರವೇ ಇದಕ್ಕೆ ಕಾರಣ ಎಂದು ಹೇಳಿದರೆ ಇನ್ನು ಕೆಲವರು ಜೆಡಿಯುನವರು ಬೆನ್ನಿಗೆ ಚೂರಿ ಹಾಕಿದರು ಎಂದು ಹೇಳಿರುವುದಾಗಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ತಿಳಿಸಿದ್ದಾರೆ.

Share this Story:

Follow Webdunia kannada