Webdunia - Bharat's app for daily news and videos

Install App

ಹೆಣ್ಣು ಮಗುವನ್ನು ತಂದೆ-ತಾಯಿಗಳೇ ಕೊಂದು ಸುಟ್ಟುಹಾಕಿದರು!

Webdunia
ಶುಕ್ರವಾರ, 18 ಏಪ್ರಿಲ್ 2014 (18:59 IST)
PR
PR
ಚನ್ನಪಟ್ಟಣ: ಒಂದೂವರೆ ವರ್ಷದ ಹೆಣ್ಣು ಮಗುವೊಂದನ್ನು ಅವಳ ತಂದೆ, ತಾಯಿಗಳೇ ಹೇಯವಾಗಿ ಹತ್ಯೆ ನಡೆಸಿ ನಂತರ ಅಲ್ಲಿಂದ ಪರಾರಿಯಾಗಿರುವ ಘಟನೆ ನಡೆದಿದೆ. ಬೆಂಗಳೂರು-ಮೈಸೂರು ರಸ್ತೆಯ ದೊಡ್ಡಮಲ್ಲೂರು ಗ್ರಾಮದ ಬಳಿ ಹಳೆಯ ಶಾಲಾ ಟಾಯ್ಲೆಟ್‌ನಲ್ಲಿ ಈ ಅಮಾನವೀಯ ಘಟನೆ ವರದಿಯಾಗಿದೆ. ಮಗುವಿಗೆ ಬೆಂಕಿಹಚ್ಚಿದ ಬಳಿಕ ದಂಪತಿ ಸ್ಥಳದಿಂದ ಕಾಣೆಯಾಗಿದ್ದರು. ಶಾಲೆಯ ಆವರಣದಲ್ಲಿ ಹೊಗೆ ಬರುತ್ತಿರುವುದನ್ನು ನೋಡಿ ಗ್ರಾಮಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದಾಗ ಪೊಲೀಸರು ಬೆಂಕಿಯನ್ನು ನಂದಿಸಿ ಮಗುವಿನ ಸುಟ್ಟದೇಹವನ್ನು ವಶಕ್ಕೆ ತೆಗೆದುಕೊಂಡರು.

ಕಳೆದ ಮೂರು ದಿನಗಳಿಂದ ಶಾಲೆಯ ಆವರಣದಲ್ಲಿ 8ವರ್ಷದ ಪುತ್ರ ಮತ್ತು ಒಂದೂವರೆ ವರ್ಷದ ಮಗಳೊಂದಿಗೆ ಹಕ್ಕಿಪಿಕ್ಕಿ ಜನಾಂಗ ನೆಲೆಸಿತ್ತು. ದಂಪತಿ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಶುಕ್ರವಾರ ಬೆಳಿಗ್ಗೆ ಪುತ್ರಿಯನ್ನು ಕೊಂದು ಶವ ಹೂಳುವುದಕ್ಕೆ ಸಮೀಪದ ಮನೆಯಲ್ಲಿ ಗುದ್ದಲಿ ಕೇಳಿದರು.ಆದರೆ ಗುದ್ದಲಿ ಕೊಡುವುದಕ್ಕೆ ಅವರು ನಿರಾಕರಿಸಿದಾಗ ಹಳೆಯ ಟೈರ್‌ಗಳ ಸಹಾಯದಿಂದ ಮಗುವನ್ನು ಸುಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ. ಸ್ಥಳೀಯರು ಶಾಲೆಯ ಆವರಣಕ್ಕೆ ಹೋದಾಗ ಈ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂತು. ಪೊಲೀಸರು ಆರೋಪಿಗಳ ಶೋಧ ನಡೆಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments