Webdunia - Bharat's app for daily news and videos

Install App

ಮತದಾನದಲ್ಲಿ ಮೂಢನಂಬಿಕೆಗಳಿಗೆ ಮೊರೆಹೋದ ಜನಪ್ರತಿನಿಧಿಗಳು

Webdunia
ಗುರುವಾರ, 17 ಏಪ್ರಿಲ್ 2014 (13:01 IST)
PR
PR
ಬೆಂಗಳೂರು: ಮತದಾನದ ಕಾಲದಲ್ಲಿ ನಮ್ಮ ಜನಪ್ರತಿನಿಧಿಗಳು ಎನಿಸಿಕೊಂಡವರು ಅನೇಕ ಮೂಢನಂಬಿಕೆಗಳಿಗೆ ಶರಣಾದ ಘಟನೆ ನಡೆದಿದೆ.ಕೇಂದ್ರಸಚಿವ ಮುನಿಯಪ್ಪ ಕೂಡ ಇಂತಹ ಮೂಢನಂಬಿಕೆಗೆ ಮೊರೆಹೋದ ಸುದ್ದಿ ಬಂದಿತ್ತು. ಮುನಿಯಪ್ಪ ಮತಯಂತ್ರದ ದಿಕ್ಕನ್ನು ಬದಲಾಯಿಸಿ ಮತ ಚಲಾಯಿಸಿದ್ದರು. ಮುನಿಯಪ್ಪನವರಿಗೆ ಮತಗಟ್ಟೆಯಲ್ಲಿ ವಾಸ್ತುದೋಷದ ಭೀತಿ ಆವರಿಸಿದ್ದರಿಂದ ಈ ರೀತಿಯಲ್ಲಿ ಮತಚಲಾಯಿಸಿದ್ದರು. ಈಗ ಜನಪ್ರತಿನಿಧಿಗಳು ಎನಿಸಿಕೊಂಡ ಮಾಜಿ ಸಚಿವ ಚೆನ್ನಿಗಪ್ಪ ಕೂಡ ಮೂಢನಂಬಿಕೆಗೆ ಶರಣಾಗಿ ತಮ್ಮ ಮತವನ್ನು ತಮ್ಮ ಪತ್ನಿ ಕೈಯಿಂದ ಹಾಕಿಸಿದ ಘಟನೆ ನಡೆದಿದೆ.

ನೆಲಮಂಗಲದ ಬೈರನಾಯಕನಹಳ್ಳಿ ಮತಗಟ್ಟೆಯಲ್ಲಿ ಚೆನ್ನಿಗಪ್ಪ ಬದಲಿಗೆ ಪತ್ನಿ ಸಿದ್ದಗಂಗಮ್ಮ ಮತದಾನ ಮಾಡಿದರು. ಚೆನ್ನಿಗಪ್ಪ ಅವರಿಗೆ ತಮ್ಮ ಪತ್ನಿ ಮನೆಗೆ ಮಹಾಲಕ್ಷ್ಮಿ ಎಂಬ ನಂಬಿಕೆ ಇರುವುದರಿಂದ ಪತ್ನಿಯ ಕೈಯಲ್ಲೇ ಮತದಾನ ಮಾಡಿಸಿದ್ದಾರೆಂದು ತಿಳಿದುಬಂದಿದೆ. ಜೆಡಿಎಸ್ ಮುಖಂಡ ದೇವೇಗೌಡರು ಐದು ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ನಂತರ ಮತದಾನ ಮಾಡಿದ ಘಟನೆ ನಡೆದಿದೆ. ಆದರೆ ಇದು ದೇವರ ಮೇಲಿನ ನಂಬಿಕೆಯೇ ಹೊರತು ಮೂಢನಂಬಿಕೆ ವ್ಯಾಪ್ತಿಯಲ್ಲಿ ಬರುವುದಿಲ್ಲ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments