ಈ ಬಾರಿಯ ಲೋಕಸಭೆ ಚುನಾವಣೆ ಮತದಾನದ ಸಂದರ್ಭದಲ್ಲಿ ಬೆಳಿಗ್ಗೆಯಿಂದ ಇಬ್ಬರು ಕರ್ತವ್ಯನಿರತ ಚುನಾವಣೆ ಸಿಬ್ಬಂದಿ ಮತ್ತು ನಾಲ್ವರು ವೃದ್ಧ ಮತದಾರರು ಸೇರಿದಂತೆ ಒಟ್ಟು 6 ಮಂದಿ ದುರ್ಮರಣಕ್ಕೆ ಈಡಾಗಿದ್ದಾರೆ. ಚಾಮರಾಜನಗರದ ಮತಗಟ್ಟೆಯ ಬಳಿ ಹೃದಯಾಘಾತದಿಂದ 60 ವರ್ಷ ವಯಸ್ಸಿನ ಚಂದ್ರಮ್ಮ ಎಂಬ ವೃದ್ಧೆ ಸಾವನ್ನಪ್ಪಿದ್ದಾರೆ.ಚಾಮರಾಜನಗರ ತಾಲೂಕಿನ ಎಚ್. ಮೂಕಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಸುರಪುರ ತಾಲೂಕಿನ ದೇವಾಪುರ ಗ್ರಾಮದಲ್ಲಿ ಮತದಾನದ ನಂತರ ಮಾನಪ್ಪ ಬಾವಿ(50 ವರ್ಷ) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬಿಸಿಲಿನ ಬೇಗೆಯಿಂದ ಬಳಲಿದ್ದರಿಂದ ಮತ್ತು ತುಂಬಾ ಹೊತ್ತು ಸರತಿ ಸಾಲಿನಲ್ಲಿ ನಿಂತಿದ್ದರಿಂದ ಹೀಗೆ ಸಾವುಗಳು ಸಂಭವಿಸಿರಬಹುದೆಂದು ಹೇಳಲಾಗಿದೆ.