ಗುಲಬರ್ಗಾದ ಲೋಕ ಸಭಾ ಚುನಾವಣೆಯ ಮತದಾನದ ಯಂತ್ರದಲ್ಲಿ ಆಮ್ ಆದ್ಮಿ ಪಕ್ಷದ ಚಿಹ್ನೆ ಸಣ್ಣದಾಗಿದೆ ಎಂದು ಆಪ್ ಪಾರ್ಟಿಯ ಅಭ್ಯರ್ಥಿ ಬಿ ಟಿ ಲಲಿತಾನಾಯಕ್ ಕಿಡಿಕಾರಿದ್ದಾರೆ.
ಆಡಳಿತ ಪಕ್ಷದ ಕುತಂತ್ರದಿಂದ ಈ ತರಹ ಮಾಡಿದ್ದಾರೆ. ಇದಕ್ಕೆಲ್ಲಾ ಪ್ರಭಾವಿ ರಾಜಕಾರಣಿಗಳ ಕೈವಾಡವಿದೆ ಎಂದು ಬಿಟಿ ಲಲಿತಾನಾಯಕ್ ಆರೋಪಿಸಿದ್ದಾರೆ. ಈ ಕುರಿತು ಚುನಾವಣೆ ಆಯೋಗಕ್ಕೆ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಗುಲಬರ್ಗಾ ಲೋಕ ಸಭೆಯಲ್ಲಿ ಘಟಾನುಘಟಿಗಳು ಸ್ಪರ್ದಿಸುತ್ತಿದ್ದಾರೆ . ಕಣದಲ್ಲಿ ಹಾಲಿ ಲೋಕಸಭೆ ಸಚಿವ ಮತ್ತು ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ , ಬಿಜೆಪಿಯಿಂದ ರೇವುನಾಯಕ ಬೆಳಮಗಿ ( ಮಾಜಿ ಸಚಿವರು), ಜೆಡಿಎಸ್ನಿಂದ ಡಿಜಿ ಸಾಗರ ಕಣಕ್ಕೆ ಇಳಿದಿದ್ದಾರೆ ಮತ್ತು ಆಮ್ ಆದ್ಮಿ ಪಾರ್ಟಿಯಿಂದ ಬಿ ಟಿ ಲಲಿತಾನಾಯಕ್ ಸ್ಪರ್ಧಿಸಿದ್ದಾರೆ.