ರಾಯಚೂರಿನ ಮಾನ್ವಿ ತಾಲ್ಲೂಕಿನ ಧೋತರಬಂಡಿಯ ಮತಗಟ್ಟೆ ಸಂಖ್ಯೆ 204 ರಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿತಗೊಂಡಿದ್ದ ಸಿಬ್ಬಂದಿ ಶ್ರೀಧರ ಗೌಡ ನಿನ್ನೆ ರಾತ್ರಿ ಅಲ್ಲಿನ ಶಾಲೆಯಲ್ಲಿ ಮಲಗಿದ್ದರು. ಇಂದು ಬೆಳಿಗ್ಗೆ 4. 30ರ ಸುಮಾರಿಗೆ ಅವರಿಗೆ ಹಾವು ಕಡಿದಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವರದಿಯಾಗಿದೆ .
ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.