Select Your Language

Notifications

webdunia
webdunia
webdunia
webdunia

ಮತದಾರರಿಗೆ ಆಮಿಷ ಒಡ್ಡಲು ಹಣ ಹಂಚಿಕೆ: ಒಟ್ಟು 6 ಜನರ ಬಂಧನ

ಮತದಾರರಿಗೆ ಆಮಿಷ ಒಡ್ಡಲು ಹಣ ಹಂಚಿಕೆ: ಒಟ್ಟು 6 ಜನರ ಬಂಧನ
, ಬುಧವಾರ, 16 ಏಪ್ರಿಲ್ 2014 (13:33 IST)
PR
PR
ತುಮಕೂರು:ನಾಳೆ ಲೋಕಸಭೆ ಚುನಾವಣೆ ಮತದಾನಕ್ಕೆ ರಾಜ್ಯವು ಸಜ್ಜಾಗುತ್ತಿದ್ದಂತೆ ಮತದಾರರಿಗೆ ಆಮಿಷ ಒಡ್ಡಲು ಅಭ್ಯರ್ಥಿಗಳು ವಿವಿಧ ರೀತಿಯ ತಂತ್ರಗಳಿಗೆ ಅಭ್ಯರ್ಥಿಗಳು ಶರಣಾಗಿದ್ದಾರೆ. ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ಮತದಾರರಿಗೆ ಹಣ ಹಂಚುತ್ತಿದ್ದ ಪುರಸಭೆ ಸದಸ್ಯ ಮಹೇಶ್ ಮತ್ತು ದಯಾನಂದ್ ಎಂಬವರನ್ನು ಬಂಧಿಸಲಾಗಿದೆ. ಸುಮಾರು ಒಂದು ಲಕ್ಷ ರೂ. ನಗದುಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಕೂಡ ಹಣ ಹಂಚುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. 2.25 ಲಕ್ಷ ರೂ. ನಗದು, ಚೆಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿಯ ಭಾವಚಿತ್ರವಿರುವ ಕರಪತ್ರಗಳನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ.

Share this Story:

Follow Webdunia kannada