Select Your Language

Notifications

webdunia
webdunia
webdunia
webdunia

ವಾಸ್ತವಾಂಶ ಹೀಗಿದೆ ನೋಡಿ; ಬಿಜೆಪಿ ಹೈಕಮಾಂಡ್‌ಗೆ ರಾಘವೇಂದ್ರ

ವಾಸ್ತವಾಂಶ ಹೀಗಿದೆ ನೋಡಿ; ಬಿಜೆಪಿ ಹೈಕಮಾಂಡ್‌ಗೆ ರಾಘವೇಂದ್ರ
ಬೆಂಗಳೂರು , ಸೋಮವಾರ, 19 ಮಾರ್ಚ್ 2012 (10:52 IST)
PR
ಮಾಧ್ಯಮಗಳ ಎದುರು ಬಂದಾಗ ರಾಜ್ಯ ಬಿಜೆಪಿಯಲ್ಲಿ ಯಾವುದೇ ಬಿನ್ನಮತವಿಲ್ಲ ಎಂದು ಖಡಕ್ ಆಗಿ ಮಾತನಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಇದೀಗ ತನ್ನ ಬೆಂಬಲಿತ ಶಾಸಕರನ್ನು ರೆಸಾರ್ಟಿಗೆ ಕರೆದುಕೊಂಡು ಹೋಗಿ ಅವರೊಂದಿಗೆ ರಾಜಕೀಯ ಒಲಸಂಚು ನೀತಿ ರೂಪಿಸುತ್ತಿರುವ ಬೆನ್ನಲ್ಲೇ, ಅವರ ಮಗ ಹಾಗೂ ಸಂಸದ ರಾಘವೇಂದ್ರ ಸೇರಿದಂತೆ ಹತ್ತು ಮಂದಿ ಸಂಸದರು ಸೋಮವಾರ ದೆಹಲಿಗೆ ತೆರಳಿದ್ದು ಹೈಕಮಾಂಡ್‌ಗೆ ವಾಸ್ತವಾಂಸದ ಕುರಿತು ಬೋದನೆ ಮಾಡಲಿದ್ದಾರೆ.

ಈ ಸಂಬಂಧ ಮಾಧ್ಯಮದೊಂದಿಗೆ ಮಾತನಾಡಿದ ಸಂಸದ ರಾಘವೇಂದ್ರ, ರಾಜೀನಾಮೆ ಕೊಟ್ಟು ಪಲಾಯನ ವಾದ ಮಂಡಿಸಲು ನಾವು ಬಂದಿಲ್ಲ. ಅಲ್ಲದೆ, ಯಾವುದೇ ಬೆದರಿಕೆ ಒತ್ತಡಗಳನ್ನು ಹೇರಲೂ ನಾವು ಬಂದಿಲ್ಲ. ಬದಲಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯ ಆಧಾರದಲ್ಲಿ ಬಹುಮತವಿರುವವರಿಗೆ ನಾಯಕತ್ವ ವಹಿಸಿಕೊಡಲು ಹೈಕಮಾಂಡ್‌ ಬಳಿ ಮನವಿ ಸಲ್ಲಿಸಲು ಹಾಗೂ ಅಪಾರ್ಥ ಮಾಡಿಕೊಂಡಿರುವ ಹೈಕಮಾಂಡ್‌ಗೆ ವಾಸ್ತವಾಂಶವನ್ನು ತಿಳಿಯಪಡಿಸುವ ಏಕೈಕ ಉದ್ದೇಶದಿಂದ ನಾವು ಹತ್ತು ಮಂದಿ ಸಂಸದರು ಬಂದಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

Share this Story:

Follow Webdunia kannada