Select Your Language

Notifications

webdunia
webdunia
webdunia
webdunia

ಬಾಯಿಗೆ ಬಂದಂತೆ ಮಾತಾದ್ರೆ ಹುಷಾರ್: ಸದಾನಂದ ಗೌಡ ಚಾಟಿ

ಬಾಯಿಗೆ ಬಂದಂತೆ ಮಾತಾದ್ರೆ ಹುಷಾರ್: ಸದಾನಂದ ಗೌಡ ಚಾಟಿ
ಬೆಂಗಳೂರು , ಗುರುವಾರ, 8 ಮಾರ್ಚ್ 2012 (18:22 IST)
PR
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸುತ್ತೇವೆ. ಹಾಗಂತ ಹೈಕಮಾಂಡ್ ನೀಡಿರುವ ಸೂಚನೆ ಉಲ್ಲಂಘಿಸಿ ಬಾಯಿಗೆ ಬಂದಂತೆ ಹೇಳಿಕೆ ಕೊಟ್ಟರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಯಡಿಯೂರಪ್ಪ ಆಪ್ತರಿಗೆ ಟಾಂಗ್ ನೀಡಿದ್ದಾರೆ.

ಯಡಿಯೂರಪ್ಪನವರನ್ನು ಮತ್ತೆ ಮುಖ್ಯಮಂತ್ರಿ ಗಾದಿಗೆ ಏರಿಸುವುದು ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬಿಟ್ಟ ವಿಷಯ ಎಂದು ನಾನು ಹೇಳಿಕೆ ನೀಡಿರುವುದು ನಿಜ. ಆ ಹೇಳಿಕೆಗೆ ಈಗಲೂ ಬದ್ಧ. ಆದರೆ ಇದರ ವಿರುದ್ಧ ಶಾಸಕರು, ಮಂತ್ರಿಗಳು ಮಾತನಾಡುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ನಾನು ಮಾತು ತಿರುಚುವವನಲ್ಲ. ಚೆನ್ನಾಗಿ ಯೋಚನೆ ಮಾಡಿಯೇ ಮಾತನಾಡುತ್ತೇನೆ. ಯಾರೆಲ್ಲ ಏನೇನೋ ಹೇಳುತ್ತಾರೆ ಅಂತ ಅದಕ್ಕೆಲ್ಲ ಪ್ರತಿಕ್ರಿಯೆ ಕೊಡೋದಿಲ್ಲ. ಹಾಗಂತ ಪಕ್ಷದ ಶಿಸ್ತು ಉಲ್ಲಂಘಿಸುವವರ ಬಗ್ಗೆ ಹೈಕಮಾಂಡ್ ಸೂಕ್ತ ಕ್ರಮ ಕೈಗೊಳ್ಳುತ್ತದೆ. ಅದು ಸದಾನಂದ ಗೌಡರೇ ಆಗಿರಬಹುದು ಅಥವಾ ಬೇರೆಯವರು ಕೂಡ ಎಂದು ಮಾರ್ಮಿಕವಾಗಿ ನುಡಿದರು.

Share this Story:

Follow Webdunia kannada