Select Your Language

Notifications

webdunia
webdunia
webdunia
webdunia

ಸದಾನಂದ ಗೌಡರ ಸಿಎಂ ಪಟ್ಟಕ್ಕೆ ಕುತ್ತು ತರಲು ಬಿಡಲ್ಲ: ಈಶ್ವರಪ್ಪ

ಸದಾನಂದ ಗೌಡರ ಸಿಎಂ ಪಟ್ಟಕ್ಕೆ ಕುತ್ತು ತರಲು ಬಿಡಲ್ಲ: ಈಶ್ವರಪ್ಪ
ಚಿಕ್ಕಮಗಳೂರು , ಬುಧವಾರ, 22 ಫೆಬ್ರವರಿ 2012 (18:23 IST)
PR
ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಖಡಕ್ ಸಂದೇಶ ರವಾನಿಸಿದ್ದಾರೆ.

ಮುಖ್ಯಮಂತ್ರಿ ಸದಾನಂದ ಗೌಡರನ್ನು ಬದಲಾಯಿಸುವ ನಿಟ್ಟಿನಲ್ಲಿ ರಣತಂತ್ರ ರೂಪಿಸಲಾಗುತ್ತಿದೆ ಎಂಬ ವರದಿಗಳನ್ನು ಅಲ್ಲಗಳೆದ ಅವರು, ಮುಖ್ಯಮಂತ್ರಿ ಬದಲಾವಣೆ ಇಲ್ಲ. ಸದಾನಂದ ಗೌಡರೇ ಮುಂದಿನ ಪೂರ್ಣಾವಧಿಗೆ ಮುಂದುವರಿಸಲಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ ಕರೆದಿರುವ ಬಿಜೆಪಿ ಶಾಸಕರು ಹಾಗೂ ಸಚಿವರ ಸಭೆಗೆ ತಮಗೂ ಆಹ್ವಾನವಿದೆ. ನಾನು ಆ ಸಭೆಯಲ್ಲಿ ಭಾಗವಹಿಸುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವೀರಶೈವ ಸಮಾಜವನ್ನು ಒಡೆಯುವ ಪ್ರಯತ್ನಕ್ಕೆ ಬಿಜೆಪಿ ಮಾಜಿ ಸಿಎಂ ಯಡಿಯೂರಪ್ಪನವರ ಆರೋಪದ ಬಗ್ಗೆಯೂ ಅವರೊಂದಿಗೆ ಚರ್ಚಿಸುವುದಾಗಿ ಹೇಳಿದರು.

Share this Story:

Follow Webdunia kannada