Select Your Language

Notifications

webdunia
webdunia
webdunia
webdunia

ಹೈಕಮಾಂಡ್ ಮುಂದೆ ಬಿಎಸ್‌ವೈ ಪರ ಬೆಂಬಲಿಗರ 'ಪರೇಡ್'

ಹೈಕಮಾಂಡ್ ಮುಂದೆ ಬಿಎಸ್‌ವೈ ಪರ ಬೆಂಬಲಿಗರ 'ಪರೇಡ್'
ಬೆಂಗಳೂರು , ಬುಧವಾರ, 22 ಫೆಬ್ರವರಿ 2012 (04:54 IST)
PR
ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪರ ಸಭೆ ನಡೆಸಿದ ಬೆಂಬಲಿಗ ಶಾಸಕರು ಹೈಕಮಾಂಡ್ ಸನ್ಮುಖದಲ್ಲಿ 'ಪರೇಡ್' ನಡೆಸಲು ನಿರ್ಧರಿಸಿದ್ದಾರೆ.

ಆ ಮೂಲಕ ಹೈಕಮಾಂಡ್ ಎದುರು ಒತ್ತಡ ತಂತ್ರ ಅನಸರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಮೊದಲು ಶಾಸಕರ ಸಭೆ ನಡೆಸಿದ್ದ ಯಡಿಯೂರಪ್ಪ ತಮ್ಮ ಬೆಂಬಲವನ್ನು ಖಾತ್ರಿಪಡಿಸಿದರು.

ಸ್ಥಾನಮಾನಗಳ ಬಗ್ಗೆ ಪಟ್ಟು ಹಿಡಿದಿರುವ ಯಡಿಯೂರಪ್ಪ, ತಮ್ಮ ಆಪ್ತರೆನಿಸಿದ್ದ ಸಿಎಂ ಸದಾನಂದ ಗೌಡ ವಿರುದ್ಧವೇ ಸಿಡಿದೆದ್ದಿದ್ದಾರೆ. ಆದರೆ ಇದನ್ನು ಬಹಿರಂಗವಾಗಿ ತೋಡಿಸಿಕೊಳ್ಳದ ಬಿಎಸ್‌ವೈ ತಮ್ಮ ಬೆಂಬಲಿಗರ ಪರ ಹೈಕಮಾಂಡ್ ಎದುರು ಬಲ ಪ್ರದರ್ಶನಕ್ಕಿಳಿದಿದ್ದಾರೆ.

ಫೆಬ್ರವರಿ 24, 25ರಂದು 'ಚಿಂತನ-ಮಂಥನ' ಭಾಗವಹಿಸಲಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಭೇಟಿಯಾಗಲಿರುವ ಯಡಿಯೂರಪ್ಪ ಚರ್ಚೆ ನಡೆಸಲಿದ್ದು, ತಮ್ಮ ಬೇಡಿಕೆ ಮುಂದಿರಿಸುವ ಸಾಧ್ಯತೆಗಳಿವೆ.

ಇದಕ್ಕೂ ಮುನ್ನ 23ರಂದು ಬೆಂಬಲಿಗರಿಗೆ ತಮ್ಮ ನಿವಾಸದಲ್ಲಿ ಯಡಿಯೂರಪ್ಪ ಭೋಜನ ಕೂಟ ಏರ್ಪಾಡು ಮಾಡಿದ್ದಾರೆಂಬ ಮಾಹಿತಿಯಿದೆ.

Share this Story:

Follow Webdunia kannada