Select Your Language

Notifications

webdunia
webdunia
webdunia
webdunia

ಪಕ್ಷದಲ್ಲಿನ ಗೊಂದಲಗಳು ಅಂತ್ಯವಾಗಿವೆ: ಸಿಎಂ

ಪಕ್ಷದಲ್ಲಿನ ಗೊಂದಲಗಳು ಅಂತ್ಯವಾಗಿವೆ: ಸಿಎಂ
ದಾವಣಗೆರೆ , ಭಾನುವಾರ, 22 ಜನವರಿ 2012 (13:10 IST)
PR
ಬಿಜೆಪಿ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಗೊಂದಲಗಳ ಬಗ್ಗೆ ಆಳವಾದ ಚರ್ಚೆಗಳು ನಡೆದಿದ್ದು, ಗೊಂದಲಗಳು ಇದೀಗ ಅಂತ್ಯಗೊಂಡಿವೆ ಎಂದು ಮುಖ್ಯಮಂತ್ರಿ ಸದಾನಂದ ಗೌಡ ಹೇಳಿದ್ದಾರೆ.

ನಾನು ತುಂಬಾ ಆಶಾವಾದಿ. ನನಗೆ ಆಶಾಭಾವನೆಯಿದೆ. ಕಳೆದ ಮೂರುವರೆ ವರ್ಷಗಳಲ್ಲಿ ರಾಜ್ಯ ರಾಜಕೀಯದಲ್ಲಿ ನಡೆದ ಹಣೆಬರಹ, ಜಾತಕ ನಿಮಗೆ ಗೊತ್ತಿದೆ ಎಂದು ವ್ಯಂಗ್ಯವಾಡಿದರು.

ಯಡಿಯೂರಪ್ಪನವರನ್ನು ಓಲೈಸಲು ಶಾಸಕರು ಮನಬಂದಂತೆ ಹೇಳಿಕೆ ನೀಡಬಾರದು ಎಂದು ಮನವಿ ಮಾಡಿದ್ದೇನೆ. ಮುಂಬರುವ ದಿನಗಳಲ್ಲಿ ಮತ್ತೆ ಇಂತಹ ಹೇಳಿಕೆಗಳನ್ನು ನೀಡಿದಲ್ಲಿ ಶಿಸ್ತು ಕ್ರಮ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.

ನಾವು ಎಷ್ಟೆ ಜಗಳವಾಡಿದರೂ ಒಂದಾಗಬೇಕಾಗಿದೆ. ಜನತೆ ನಮ್ಮನ್ನು ಹರಿಸಿ ಅಧಿಕಾರ ನೀಡಿದ್ದಾರೆ. ಒಳಜಗಳಗಳನ್ನು ಬಿಟ್ಟು ರಾಜ್ಯದ ಅಭಿವೃದ್ಧಿಯತ್ತ ಗಮನಹರಿಸಬೇಕಾಗಿದೆ ಎಂದರು.

ಪಕ್ಷದ ಸಂಘಟನೆಯ ದೃಷ್ಟಿಯಿಂದ ಯಡಿಯೂರಪ್ಪ, ಈಶ್ವರಪ್ಪ ಅವರೊಂದಿಗೆ ಆತ್ಮಾವಲೋಕನ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ಜನತೆಯ ಬಳಿ ಸಾಮೂಹಿಕ ನಾಯಕತ್ವದಲ್ಲೇ ಹೋಗುತ್ತೇವೆ ಎಂದು ಮುಖ್ಯಮಂತ್ರಿ ಸದಾನಂದ ಗೌಡ ತಿಳಿಸಿದ್ದಾರೆ.

Share this Story:

Follow Webdunia kannada