Select Your Language

Notifications

webdunia
webdunia
webdunia
webdunia

ಸ್ವಾರ್ಥಕ್ಕೆ ಮತ್ತೊಬ್ಬರನ್ನ ಬಲಿ ಕೊಡ್ಬೇಡಿ: ಯಡಿಯೂರಪ್ಪ

ಸ್ವಾರ್ಥಕ್ಕೆ ಮತ್ತೊಬ್ಬರನ್ನ ಬಲಿ ಕೊಡ್ಬೇಡಿ: ಯಡಿಯೂರಪ್ಪ
ಬೆಂಗಳೂರು , ಶನಿವಾರ, 7 ಜನವರಿ 2012 (11:46 IST)
PR
ಮತ್ತೊಬ್ಬರನ್ನು ಬಲಿ ನೀಡಿಯಾದರೂ ಸರಿ ತಾನು ಬದುಕಬೇಕೆಂಬ ದುರಾಸೆಯಿಂದ ಮನುಷ್ಯ ಹೊರ ಬರಬೇಕಿದೆ. ರಾಜಕೀಯದವರಿಗೆ ಇಂತಹ ಸಂಗತಿಗಳು ಅನುಭವಕ್ಕೆ ಬರುತ್ತಿರುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಶ್ರೀಜಗದ್ಗುರು ವಿಶಾರಾಧ್ಯ ಜನ ಕಲ್ಯಾಣ ಪ್ರತಿಷ್ಠಾನವು ನಗರದ ಗುಬ್ಬಿ ತೋಟದಪ್ಪ ಧರ್ಮ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ಕಂದ ಗೋತ್ರ ಪುರುಷ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯನಿಗೆ ಭಗವಂತನಿಗೆ ನೀಡಿದ ಬದುಕು ಒಂದು ಸುಂದರವಾದ ಅವಕಾಶ. ಅದನ್ನು ಮಾನವ ದಾನವಾಗಿ ಪರಿವರ್ತಿಸಿಕೊಂಡು ಜೀವನ ಸಾಗಿಸಬೇಕೆಂಬ ವಿವೇಕಾನಂದರ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪಾಶ್ಚಾತ್ಯ ಸಂಸ್ಕೃತಿಗೆ ಬಲಿಯಾಗುತ್ತಿರುವ ಯುವ ಪೀಳಿಗೆಗೆ ನಮ್ಮ ಧರ್ಮ, ಸಂಸ್ಕೃತಿಗಳ ಪರಂಪರೆಯನ್ನು ಮನದಟ್ಟು ಮಾಡಿಸಬೇಕಿದೆ ಎಂದರು.

Share this Story:

Follow Webdunia kannada