Select Your Language

Notifications

webdunia
webdunia
webdunia
webdunia

ಬಿಡದಿ ನಿತ್ಯಾನಂದ ಆಶ್ರಮದಲ್ಲಿ 20 ಲಕ್ಷ ರೂ. ಕಳವು

ಬಿಡದಿ ನಿತ್ಯಾನಂದ ಆಶ್ರಮದಲ್ಲಿ 20 ಲಕ್ಷ ರೂ. ಕಳವು
ರಾಮನಗರ , ಬುಧವಾರ, 28 ಡಿಸೆಂಬರ್ 2011 (18:33 IST)
PR
ಬಿಡದಿ ಸಮೀಪ ಇರುವ ನಿತ್ಯಾನಂದ ಧ್ಯಾನಪೀಠದಲ್ಲಿ ದುಷ್ಕರ್ಮಿಗಳು ದೇವಸ್ಥಾನದ ಗೋಡೆಯ ಕನ್ನ ಕೊರೆದು ಸುಮಾರು 20 ಲಕ್ಷ ರೂಪಾಯಿಯ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.

ಆಶ್ರಮದ ಆಲದ ಮರದ ಸಮೀಪವಿರುವ ಆನಂದೇಶ್ವರ ದೇವಸ್ಥಾನದ ಒಳಗಿದ್ದ ಮೂಲ ವಿಗ್ರಹದ ಮುಖವಾಡ ಹಾಗೂ ಎರಡು ಚಿನ್ನದ ಹಾರಗಳೂ, ಹುಂಡಿ ಸೇರಿದಂತೆ ಸುಮಾರು 20 ಲಕ್ಷ ಬೆಲೆಬಾಳುವ ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದಾರೆಂದು ಬಿಡದಿ ಪೊಲೀಸ್ ಠಾಣೆಗೆ ಆಶ್ರಮದವರು ದೂರು ನೀಡಿದ್ದಾರೆ.

ಸ್ಥಳಕ್ಕೆ ಬಿಡದಿ ಪೊಲೀಸ್ ಪಿಎಸ್ಐ ವಿಜಯ್ ಕುಮಾರ್ ಮತ್ತು ಸಿಬ್ಬಂದಿ, ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.

ಕಳ್ಳರು ಮಂಗಳವಾರ ರಾತ್ರಿ ದೇವಸ್ಥಾನದ ಗೋಡೆಯನ್ನು ಕೊರೆದು ಕಳವು ಮಾಡಿ ಪರಾರಿಯಾಗಿದ್ದಾರೆಂದು ಸ್ಥಳಕ್ಕೆ ಭೇಟಿ ನೀಡಿರುವ ಡಿವೈಎಸ್ಪಿ ಎಂ.ಜಿ.ರಾಮಕೃಷ್ಣಪ್ಪ ತಿಳಿಸಿದ್ದಾರೆ. ಪ್ರಕರಣ ಬಿಡದಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ.

Share this Story:

Follow Webdunia kannada