Select Your Language

Notifications

webdunia
webdunia
webdunia
webdunia

ಸದಾನಂದ ಗೌಡ ಗೆಲುವು ಖಚಿತ: ಅನಂತ ಕುಮಾರ್‌

ಸದಾನಂದ ಗೌಡ ಗೆಲುವು ಖಚಿತ: ಅನಂತ ಕುಮಾರ್‌
ಬೆಂಗಳೂರು , ಭಾನುವಾರ, 11 ಡಿಸೆಂಬರ್ 2011 (13:32 IST)
WD
ವಿಧಾನ ಪರಿಷತ್‌ ಚುನಾವಣೆಯಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಗೆಲುವುಸಾಧಿಸಲಿದ್ದು, ಸರಕಾರಕ್ಕೆ ಯಾವುದೇ ಅಪಾಯವಿಲ್ಲ ಎಂದು ಸಂದಸ ಅನಂತಕುಮಾರ್‌ ಹೇಳಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅನಂತಕುಮಾರ್‌, ಪಕ್ಷವು ಸದಾನಂದಗೌಡರ ಪರವಾಗಿರುವುದರಿಂದ ಅವರ ಗೆಲುವಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದ್ದಾರೆ.

ಅಣ್ಣಾ ಹೋರಾಟಕ್ಕೆ ಬೆಂಬಲ
ಸಶಕ್ತ ಲೋಕಪಾಲ ಮಸೂದೆಗೆ ಆಗ್ರಹಿಸಿ ಅಣ್ಣಾ ಹಜಾರೆ ಅವರು ನವದೆಹಲಿಯ ಜಂತರ್‌ಮಂತರ್‌ನಲ್ಲಿ ನಡೆಸುತ್ತಿರುವ ಒಂದು ದಿನದ ಸಂಕೇತಿಕ ಮುಷ್ಕರಕ್ಕೆ ಬಿಜೆಪಿ ಬೆಂಬಲಿಸಲಿದೆ ಎಂದು ಅನಂತ ಕುಮಾರ್‌ ಹೇಳಿದರು.

ಲೋಕಪಾಲ ವ್ಯಾಪ್ತಿಗೆ ಪ್ರಧಾನಿ ಹಾಗೂ ಸಿಬಿಐ ಸೇರಿಸಬೇಕು ಎಂದು ಪ್ರತಿಪಕ್ಷಗಳು ನಿರ್ಣಯ ಮಂಡಿಸಿದ್ದರೂ ಸಹಾ ಲೋಕಪಾಲ ಮಸೂದೆ ಸ್ಥಾಯಿ ಸಮಿತಿ ಇದನ್ನು ಪರಿಗಣಿಸಿಲ್ಲ. ಹಾಗಾಗಿ ಬಿಜೆಪಿ ಲೋಕಪಾಲ ಮದೂದೆ ಕರಡಿಗೆ ವಿರೋಧ ವ್ಯಕ್ತಪಡಿಸಿದೆ ಎಂದು ಅನಂತ ಕುಮಾರ್‌ ತಿಳಿಸಿದರು.

Share this Story:

Follow Webdunia kannada