ತಮ್ಮ ನಡುವೆ ಆಗಿರುವ ಒಪ್ಪಂದಕ್ಕೆ ಅನುಗುಣವಾಗಿ ಬಿಜೆಪಿ 14 ಕ್ಷೇತ್ರಗಳಲ್ಲಿ ಕಣಕ್ಕಿಳಿಸಿರುವ ಅಭ್ಯರ್ಥಿಗಳಲ್ಲಿ ಕೆಲವರನ್ನು ಬದಲಾಯಿಸುವಂತೆ ಟಿಡಿಪಿ ಹೇಳಿತ್ತು.
' ಸಾರ್ವತ್ರಿಕ ಚುನಾವಣೆಯಲ್ಲಿ ಜೊತೆಗೆ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಕಣಕ್ಕಿಳಿಸಿರುವ ಅಭ್ಯರ್ಥಿಗಳಲ್ಲಿ ಹಲವರು ದುರ್ಬಲ ಅಭ್ಯರ್ಥಿಗಳಾಗಿದ್ದು, ಅದು ನಾಯ್ಡು ಪಕ್ಷದ ಲೋಕಸಭಾ ಅಭ್ಯರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು' ಎಂದು ಅವರ ಪಕ್ಷ ವಾದಿಸುತ್ತಿದೆ.
' ಆದರೆ ಈಗಾಗಲೇ ಸೀಟುಗಳನ್ನು ಹಂಚಲಾಗಿದ್ದು ಈ ವಿಷಯದಲ್ಲಿ ಮಧ್ಯಪ್ರವೇಶಿಸಿಸದಂತೆ' ರಾಜ್ಯ ಬಿಜೆಪಿ ತನ್ನ ಮಿತ್ರ ಪಕ್ಷಕ್ಕೆ ಹೇಳಿತ್ತು.
' ಬಿಜೆಪಿಗೆ ಶನಿವಾರದವರೆಗೆ ಸಮಯ ನೀಡುತ್ತೇವೆ. ಆಗಲೂ ಅವರು ನಾವು ಸೂಚಿಸಿದ ಅಭ್ಯರ್ಥಿಗಳನ್ನು ಕಣದಿಂದ ಹಿಂದಕ್ಕೆ ಕರೆದುಕೊಳ್ಳದಿದ್ದರೆ ನಾವು ಆ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ' ಎಂದು ಟಿಡಿಪಿಯ ಮೂಲಗಳು ತಿಳಿಸಿವೆ.