Select Your Language

Notifications

webdunia
webdunia
webdunia
webdunia

ಯಾತ್ರೆ ವಿಫಲ, ಆಡ್ವಾಣಿ ರಾಜಕೀಯ ತ್ಯಜಿಸಲಿ: ಕಾಂಗ್ರೆಸ್

ಯಾತ್ರೆ ವಿಫಲ, ಆಡ್ವಾಣಿ ರಾಜಕೀಯ ತ್ಯಜಿಸಲಿ: ಕಾಂಗ್ರೆಸ್
ಡೆಹರಾಡೂನ್ , ಶನಿವಾರ, 19 ನವೆಂಬರ್ 2011 (09:31 IST)
PTI
ಬಿಜೆಪಿ ಮುಖಂಡ ಆಡ್ವಾಣಿಯವರ ಜನ ಚೇತನಾ ಯಾತ್ರೆ ಉತ್ತರಾಖಂಡ್ ರಾಜ್ಯದಲ್ಲಿ ವಿಫಲವಾಗಿದ್ದರಿಂದ ಆಡ್ವಾಣಿ ಕೂಡಲೇ ರಾಜಕೀಯ ತ್ಯಜಿಸುವುದು ಸೂಕ್ತ ಎಂದು ಕಾಂಗ್ರೆಸ್ ಸಲಹೆ ನೀಡಿದೆ.

ಸಾಮಾನ್ಯ ಜನರ ಗಮನ ಸೆಳೆಯುವಲ್ಲಿ ಜನ ಚೇತನಾ ಯಾತ್ರೆ ವಿಫಲವಾಗಿದ್ದರಿಂದ ಆಡ್ವಾಣಿ ರಾಜಕೀಯದಿಂದ ದೂರವಿರುವುದು ಸೂಕ್ತ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಸುರೇಂದ್ರಾ ಕುಮಾರ್ ಹೇಳಿದ್ದಾರೆ.

ಉತ್ತರಾಖಂಡ್ ರಾಜ್ಯದಲ್ಲಿ ನಿನ್ನೆ ನಡೆದ ಆಡ್ವಾಣಿ ಯಾತ್ರೆಯಲ್ಲಿ ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ರಾಷ್ಟ್ರ ರಾಜಕಾರಣದಲ್ಲಿ ಆಡ್ವಾಣಿಯ ಪ್ರಭಾವ ಕುಸಿದಿದೆ ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ನೇತೃತ್ವದ ಸರಕಾರವಿರುವ ರಾಜ್ಯಗಳ ಭ್ರಷ್ಟಾಚಾರದ ಬಗ್ಗೆ ಆಡ್ವಾಣಿ ಟೀಕಿಸುತ್ತಾರೆ. ಆದರೆ, ಬಿಜೆಪಿ ಅಧಿಕಾರವಿರುವ ರಾಜ್ಯಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಮೌನವಾಗಿದ್ದು, ದ್ವಂದ ಧೋರಣೆ ತೋರುತ್ತಿರುವುದು ಯಾವ ನ್ಯಾಯ ಎಂದು ಕಾಂಗ್ರೆಸ್ ವಕ್ತಾರ ಕುಮಾರ್ ಪ್ರಶ್ನಿಸಿದ್ದಾರೆ.

Share this Story:

Follow Webdunia kannada