Webdunia - Bharat's app for daily news and videos

Install App

ಬೇಸಿಗೆ ಸಮಯದಲ್ಲಿ ಈ ಐದು ಪದಾರ್ಥಗಳನ್ನು ಸೇವಿಸಬೇಡಿ

Webdunia
ಶನಿವಾರ, 19 ಏಪ್ರಿಲ್ 2014 (17:52 IST)
PR
ಎಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಹೆಚ್ಚು ಬಿಸಿಲು ಇದ್ದ ಕಾರಣ ವಾತಾವರಣದ ತಾಪಮಾನ ಹೆಚ್ಚಿಗೆ ಇರುತ್ತದೆ. ಇದರಿಂದ ಶರೀರದಲ್ಲಿ ಕೂಡ ತಾಪಮಾನ ಹೆಚ್ಚುತ್ತದೆ. ಇದರಿಂದ ಆಯಾಸವಾಗುತ್ತದೆ ಮತ್ತು ಸೆಕೆಯಿಂದಾಗಿ ಏಕಾಗ್ರತೆಗೆ ತೊಂದರೆ ಆಗುತ್ತದೆ.

ಬೇಸಿಗೆಯಲ್ಲಿ ನೀರು ಕುಡಿಯುವುದು ಎಷ್ಟು ಮುಖ್ಯವೋ , ಆಹಾರ ಸೇವಿಸಬೇಕಾದಾಗ ಕೂಡ ಗಮನಹರಿಸುವುದು ಅಷ್ಟೇ ಮುಖ್ಯ. ಬೇಸಿಗೆ ಸಮಯದಲ್ಲಿ ಕೆಲವು ಆಹಾರ ಸೇವನೆ ಮಾಡಿದರೆ ಶರೀರದ ಮೇಲೆ ದುಷ್ಪರಿಣಾಮ ಕೂಡ ಬಿರುತ್ತದೆ , ಹಾಗದರೆ ಬೇಸಿಗೆಯಲ್ಲಿ ಏನನ್ನು ತಿನ್ನಬಾರದು ಎಂದು ತಿಳಿಯಲು ಮುಂದೆ ಓದಿ.

PR
1. ಹೆಚ್ಚಿನ ಮಸಾಲಾ ಪದಾರ್ಥ ತಿನ್ನಬೇಡಿ : ಬೇಸಿಗೆ ಕಾಲದಲ್ಲಿ ಹೆಚ್ಚಿನ ಮಸಾಲಾ ಪದಾರ್ಥ ಇರುವ ಆಹಾರ ಸೇವನೆ ಮಾಡಬೇಡಿ. ಮಸಾಲಾ ಹೆಚ್ಚು ಸೇವಿಸುವುದರಿಂದ ಶರೀರದಲ್ಲಿ ತಾಪಮಾನ ಹೆಚ್ಚುವುದರ ಮೂಲಕ ಪಚನವಾಗದೆ ಹೊಟ್ಟೆ ನೋವು ಪ್ರಾರಂಭವಾಗುತ್ತದೆ.

PR
2. ಮಾಂಸಾಹಾರ : ಮೀನು, ಚಿಕನ್‌‌, ಮಾಂಸ ಮತ್ತು ಹೆಚ್ಚು ಗ್ರೇವಿ ಇರುವ ಆಹಾರ ಸೇವನೆ ಮಾಡಬೇಡಿ. ಇವುಗಳನ್ನು ಸೇವಿಸುವುದರಿಂದ ಶರೀರದಲ್ಲಿನ ತಾಪಮಾನ ಹೆಚ್ಚಾಗುತ್ತದೆ ಮತ್ತು ಪಚನಕ್ರೀಯೆಯ ಮೇಲೆ ಕೂಡ ದುಷ್ಪರಿಣಾಮ ಬೀರುತ್ತದೆ.

PR
3. ಆಯಿಲ್‌ ಮತ್ತು ಜಂಕ್‌ ಫುಡ್‌‌ : ಈ ಬೇಸಿಗೆಯ ಸಮಯದಲ್ಲಿ ಮಾಂಸ, ಪಿಜ್ಜಾ, ಬರ್ಗರ್‌‌ , ಡಿಪ್‌ ಪ್ರಾಯಿಡ್ ಆಹಾರ ಮತ್ತು ಇತರ ಎಣ್ಣೆ ಪದಾರ್ಥ ಸೇವನೆ ಮಾಡಬೇಡಿ ಇದರಿಂದ ನಿಮ್ಮ ಶರೀರದಲ್ಲಿಯ ತಾಪಮಾನ ಹೆಚ್ಚಾಗುತ್ತದೆ.

PR
4. ಚಹಾ ಮತ್ತು ಕಾಫಿ : ಈ ಪಾನಿಯ ಪದಾರ್ಥಗಳನ್ನು ಬೇಸಿಗೆ ಸಮಯದಲ್ಲಿ ಸೇವಿಸುವುದನ್ನು ಬಿಟ್ಟು ಬಿಡಿ ಅಥವಾ ಕಡಿಮೆ ಮಾಡಿ. ಈ ಪಾನಿಯಗಳನ್ನು ಸೇವಿಸುವುದರಿಂದ ಇದರಲ್ಲಿರುವ ಕೆಫಿನ್‌ ಮತ್ತು ಇತರ ಪಾನಿಯ ಪದಾರ್ಥ ನಿಮ್ಮ ಶರೀರದ ತಾಪಮಾನ ಹೆಚ್ಚುತ್ತದೆ ಮತ್ತು ಶರೀರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

PR
5. ಸಾಸ್ : ಸಾಸ್ ಕೂಡ ನಿಮ್ಮ ಶರೀರದಲ್ಲಿನ ತಾಪಮಾನ ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿ 350 ಕ್ಯಾಲೊರಿ ಇರುತ್ತದೆ. ಇದು ನಿಮ್ಮನ್ನು ಸುಸ್ತಾಗಿಸುತ್ತದೆ. ಕೆಲವು ಸಾಸ್‌‌ಗಳಲ್ಲಿ ಹೆಚ್ಚು ಉಪ್ಪು ಮತ್ತು ಮೊನೊಸೊಡಿಯಂ ಗ್ಲೂಟಮೆಂಟ್‌‌‌‌ ಇರುತ್ತದೆ.

ಇವುಗಳೆಲ್ಲವನ್ನು ತ್ಯಜಿಸಿ ಸಾಮಾನ್ಯ ಆಹಾರದ ಜೊತೆಗೆ ಲಸ್ಸಿ , ನಿಂಬೆ ಹಣ್ಣಿನ ಶರಬತ್‌ , ಮತ್ತು ಮಾವಿನ ರಸದಂತಹ ಪದಾರ್ಥವನ್ನು ಸೇವನೆ ಮಾಡಿ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments