Webdunia - Bharat's app for daily news and videos

Install App

ದೀಪಾವಳಿ ಹಬ್ಬದ ಕತ್ತಲೆಯಿಂದ ಬೆಳಕಿನೆಡೆಗೆ...

Webdunia
PR
ದೀಪಾವಳಿ ಹಬ್ಬವು ಹಿಂದೂ ಧರ್ಮದವರಿಗೆ ದೀಪಗಳ ಹಬ್ಬ. ಉತ್ತರ ಭಾರತದವರಿಗೆ ಇದು ಹೊಸ ವರ್ಷದ ಆರಂಭ. ದೀಪಾವಳಿ ಹಬ್ಬವು ಕೆಡುಕಿನ ಮೇಲೆ ಶುಭದ ಜಯವನ್ನು ಸಾರುತ್ತದೆ. ಇದರ ಹಿಂದೆ ಹಲವು ಪೌರಾಣಿಕ ಕಥೆಗಳು ಇವೆ. ದೀಪಾವಳಿಯಲ್ಲಿ ಉತ್ತರ ಭಾರತದಲ್ಲಿ ಲಕ್ಷ್ಮಿ ಪೂಜೆಯು ಪ್ರಮುಖವಾಗಿದೆ.

ಹಿಂದೂ ಧರ್ಮದ ಜನರು ದೀಪಾವಳಿ ಹಬ್ಬವನ್ನು ಪ್ರಪಂಚದ ಎಲ್ಲಡೆ ಬಹಳ ಸಂತೋಷ ಸಡಗರದಿಂದ ಆಚರಿಸುತ್ತಾರೆ. ದೀಪಾವಳಿ ಹಬ್ಬ ಬಂತೆಂದರೆ ಎಲ್ಲರಿಗೂ ಖುಷಿಯೋ ಖುಷಿ. ಅದರಲ್ಲಿ ಪ್ರಮುಖವಾಗಿ ಮಕ್ಕಳಿಗೆ. ಹೊಸ ಬಟ್ಟೆಗಳನ್ನು ತೊಟ್ಟು ಸಿಹಿತಿಂಡಿಗಳನ್ನು ಹಂಚಿ ಪಟಾಕಿಗಳನ್ನು ಸಿಡಿಸಿ ಬಹಳ ವಿಜೃಂಭಣೆಯಿಂದ ಈ ಹಬ್ಬದಲ್ಲಿ ಮಕ್ಕಳು ಮಗ್ನವಾಗುತ್ತಾರೆ.

ದೀಪಾವಳಿಯ ಹೊಸ್ತಿಲಲ್ಲಿ ನಿಂತು ನಮ್ಮ ದೇಶದಲ್ಲಿನ ಸ್ಥಿತಿಗತಿಯನ್ನು ಗಮನಿಸಿದಾಗ ಅತ್ಯಂತ ನೋವಿನ ಸಂಗತಿಗಳೇ ಕಾಣುತ್ತವೆ. ಇತ್ತೀಚಿಗೆ ದೇಶದೆಲ್ಲಡೆ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ ಅನೇಕ ಮಂದಿ ಜೀವ ಕಳೆದುಕೊಂಡರು. ಸಾವಿರಾರು ಜನರು ಗಾಯಗೊಂಡಿದ್ದಾರೆ. ಜನರು ಭಯಭೀತಿಗೊಳಗಾಗಿದ್ದಾರೆ. ಭಯೋತ್ಪಾದನೆಗೆ ಪ್ರೇರೆಪಿಸುವಂತಹ ಇಂತಹ ಅನೇಕ ಸಂಘಟನೆಗಳ ನಿರ್ಮ‌ೂಲನೆಯಾಗಬೇಕಿದೆ. ಇದಕ್ಕಾಗಿ ದೇಶದ ಎಲ್ಲಾ ಭಾಗದ ಜನರು ಜಾತಿ, ಮತ ಭೇದವಿಲ್ಲದೆ ಕಾರ್ಯಪ್ರವೃತ್ತರಾಗಬೇಕಿದೆ. ಇಂತಹ ದುಷ್ಕೃತ್ಯಗಳನ್ನು ನಡೆಸುವವರ ಮನದ ಕತ್ತಲನ್ನು ಓಡಿಸುವವರು ಯಾರು?

ಅಭಿವೃದ್ಧಿಯ ಪಥದಲ್ಲಿರುವ ಭಾರತವು ಅನೇಕ ಕ್ಷೇತ್ರಗಳಲ್ಲಿ ಪ್ರಗತಿಯ ಬೆಳಕು ಕಾಣಬೇಕಿದೆ. ಇದಲ್ಲದೆ ಅನೇಕ ಜನರು ಪ್ರಕೃತಿ ವಿಕೋಪದಿಂದ ತತ್ತರಿಸುತ್ತಿದ್ದಾರೆ. ಇಂತಹ ಜನರು ಪರಿಹಾರಕ್ಕಾಗಿ ಎತ್ತ ನೋಡಬೇಕು ಎಂದು ತಿಳಿಯದೇ ಕಂಗಾಲಾಗಿದ್ದಾರೆ. ಇಂತಹವರ ಮನದಲ್ಲೂ ಬೆಳಕಿನ, ಭರವಸೆಯ ಹಬ್ಬ ಮೂಡಿಸಬೇಕಿದೆ.

ದೇಶದಲ್ಲಿ ಶಾಂತಿ, ಮತ, ಸೌಹಾರ್ದತೆಯನ್ನುಂಟು ಮಾಡಲು ಇಂತಹ ಹಬ್ಬಗಳಿಗೆ ಸಾಧ್ಯವಾಗಲಿ. ಕೆಡುಕಿನ ಮೇಲೆ ಒಳಿತಿನ ಜಯವನ್ನು ಸಾರುವ ದೀಪಾವಳಿ ಹಬ್ಬವು ನಾಡಿನೆಲ್ಲೆಡೆ ಸುಖ, ಶಾಂತಿ, ಸೌಹಾರ್ದತೆಯ ವಾತಾವರಣವನ್ನು ಮೂಡಿಸಲಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments