Webdunia - Bharat's app for daily news and videos

Install App

ಮೈಕ್ ಆನ್ ಇದ್ದಾಗ ದುಡ್ಡಿನ ಮಾತಾಡಬೇಡ ಎಂದ ಬಾಬಾ ರಾಮದೇವ್

Webdunia
ಶುಕ್ರವಾರ, 18 ಏಪ್ರಿಲ್ 2014 (19:13 IST)
ಧ್ವನಿವರ್ಧಕ ಆನ್ ಇದ್ದಾಗ ದುಡ್ಡಿನ ಮಾತಾಡ ಬೇಡ ಎಂದು ಬಿಜೆಪಿ ಅಭ್ಯರ್ಥಿ ಮಹಂತ್ ಚಂದ್ರನಾಥರ ಬಳಿ ಹೇಳುತ್ತಿದ್ದ ಬಾಬಾ ರಾಮದೇವ್ ಮಾತು ಕ್ಯಾಮರಾ ಸೆರೆಯಾಗುವುದರ ಮೂಲಕ ಅವರನ್ನು ಮುಜುಗರಕ್ಕೀಡು ಮಾಡಿದೆ.
PTI

ಪತ್ರಿಕಾಗೋಷ್ಠಿ ಪ್ರಾರಂಭವಾಗುವ ಮೊದಲು ಬಾಬಾ ಪಕ್ಕ ಕುಳಿತಿದ್ದ ಮಹಂತ್ ಚಂದ್ರನಾಥ, ಬಾಬಾರ ಹತ್ತಿರ ಅಲವರ್ ಸಂಸದೀಯ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರಕ್ಕೆ ನನಗೆ ಹಣದ ಕೊರತೆಯಾಗುತ್ತಿದೆ ಎಂದು ಹೇಳಿದ್ದಾರೆ. ಆ ಸಂದರ್ಭದಲ್ಲಿ ರಾಮದೇವ್ ಮೈಕ್ ಆನ್ ಇದ್ದಾಗ ಧನದ ಪ್ರಸ್ತಾಪ ಮಾಡಬೇಡ ಎಂದು ಪ್ರತಿಕ್ರಿಯಿಸಿದ್ದು ಕ್ಯಾಮರಾದಲ್ಲಿ ರೆಕಾರ್ಡ್ ಆಯಿತು. ಆ ಸಮಯದಲ್ಲಿ ಮೈಕ್ ಸಹ ಆನ್ ಆಗಿತ್ತು.

ಬಾಬಾ ಮೆಲುದನಿಯಲ್ಲಿ " ಇಲ್ಲಿ ಅದನ್ನು ಮಾತಾಡುವುದನ್ನು ನಿಲ್ಲಿಸು. ನೀನು ಮೂರ್ಖ" ಎಂದರು. ಪ್ರತಿಯಾಗಿ ಮಹಂತ ನಕ್ಕರು.

ಆದರೆ ನಾನು ಬಾಬಾರ ಬಳಿ ಅಂತಹ ಯಾವ ಮಾತನ್ನು ಆಡಿರಲಿಲ್ಲ ಎಂದು ಅಲವರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹಂತ್ ತಿಳಿಸಿದ್ದಾರೆ. ಅಲವರ್ ರಾಜಸ್ಥಾನದಲ್ಲಿನ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿದ್ದು ಎಪ್ರೀಲ್ 24 ಕ್ಕೆ ಅಲ್ಲಿ ಮತದಾನ ನಡೆಯಲಿದೆ.

ಈ ಘಟನೆಯನ್ನು ಟೀಕಿಸಿರುವ ಕಾಂಗ್ರೆಸ್ ಮತದಾರರಿಗೆ ಧನ ಹಂಚುವ ಪ್ರಕರಣದಡಿ ಬಾಬಾ ಮತ್ತು ಮಹಂತ್‌ರನ್ನು ಬಂಧಿಸುವಂತೆ ಒತ್ತಾಯಿಸಿದೆ.

ಉಲ್ಲೇಖನೀಯ ವಿಷಯವೇನೆಂದರೆ ಬಾಬಾ ವಿದೇಶದಲ್ಲಿ ಕೂಡಿಟ್ಟುರುವ ಕಪ್ಪು ಹಣವನ್ನು ಮರಳಿ ತರಿಸಲು ಹೋರಾಟ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments