Webdunia - Bharat's app for daily news and videos

Install App

ಶಾಸಕರ ವಿರುದ್ಧ ಅತ್ಯಾಚಾರ ಆರೋಪ ಮಾಡಿದ ಮಹಿಳೆ ನಿಗೂಢ ಸಾವು

Webdunia
ಸೋಮವಾರ, 31 ಮಾರ್ಚ್ 2014 (18:54 IST)
ಬಿಲಾಸ್‌ಪುರ: ಚತ್ತೀಸ್‌ಗಢ ವಿಧಾನಸಭೆಗೆ ಕೇವಲ ಒಂದು ದಿನ ಬಾಕಿಇರುವಂತೆ, ಬಿಜೆಪಿ ಶಾಸಕ ಮತ್ತು ಮಾಜಿ ಆರೋಗ್ಯ ಸಚಿವ ಕೃಷ್ಣಮೂರ್ತಿ ಬಾಂಧಿ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ ಮಹಿಳೆಯೊಬ್ಬರು ನಿಗೂಢ ರೀತಿಯಲ್ಲಿ ಸುಟ್ಟಗಾಯಗಳಿಂದ ಮೃತಪಟ್ಟಿರುವ ಘಟನೆ ಸಂಭವಿಸಿದೆ. ಬಾಂಧಿ ಅವರ ಸಹಚರ, ಮಾಜಿ ನ್ಯಾಯಾಧೀಶ ಭಾರದ್ವಾಜ್ ಮನೆಯಲ್ಲಿ ಈ ಮಹಿಳೆ ಮೃತಪಟ್ಟಿದ್ದಾಳೆ. ಬಾಂಧಿ ಬಿಲಾಸ್‌ಪುರ ಜಿಲ್ಲೆಯ ಮಾಸ್ತುರಿ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ. ಮಹಿಳೆ ನೀಡಿರುವ ದೂರಿನಲ್ಲಿ ಭಾರದ್ವಾಜ್ ನನ್ನ ಮೇಲೆ ಮೊದಲಿಗೆ ಅತ್ಯಾಚಾರವೆಸಗಿದರು ಮತ್ತು ಬಾಂಧಿಗೆ ಪರಿಚಯಿಸಿ ಬಿಜೆಪಿ ನಾಯಕ ನಿನ್ನನ್ನು ಮತ್ತು ಮಕ್ಕಳನ್ನು ನೋಡಿಕೊಳ್ತಾರೆ, ನಿನಗೆ ಕೆಲಸವನ್ನು ಕೂಡ ಒದಗಿಸ್ತಾರೆ, ಚಿಂತೆ ಮಾಡ್ಬೇಡ ಎಂದು ಹೇಳಿದ್ದರು.

ಅವರನ್ನು ನಂಬಿ ಬಾಂಧಿ ಜತೆಗೆ ಹೋದಾಗ, ಬಾಂಧಿ ನನ್ನನ್ನು ಅನೇಕ ಜನರ ಜತೆ ಸೆಕ್ಸ್‌ ಅನುಭವಿಸುವಂತೆ ಬಲಪ್ರಯೋಗ ಮಾಡಿದ್ದರಿಂದ ನಾನು ಬಲಿಪಶುವಾದೆ. ಇದು ಸುಮಾರು 3 ವರ್ಷಗಳವರೆಗೆ ಮುಂದುವರಿಯಿತು ಎಂದು ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಮಹಿಳೆ ಪತ್ರಕರ್ತರಿಗೆ ತಿಳಿಸಿದ್ದಳು. ಆದರೆ ಅದಾದ ಕೆಲವೇ ಗಂಟೆಗಳಲ್ಲಿ ಮಹಿಳೆ ಸುಟ್ಟಗಾಯಗಳಿಂದ ನಿಗೂಢವಾಗಿ ಮೃತಪಟ್ಟಿದ್ದಾಳೆ.ಭಾರದ್ವಾಜ್ ಮತ್ತು ಅವರ ಪುತ್ರನನ್ನು ಬಂಧಿಸಲಾಗಿದೆ. ಮಹಿಳೆ ದೂರು ನೀಡಿದ ಮೇಲೆ ನಿವೃತ್ತ ನ್ಯಾಯಾಧೀಶ ತಮ್ಮ ನಿವಾಸಕ್ಕೆ ಮಹಿಳೆಯನ್ನು ಕರೆದುಕೊಂಡು ಹೋಗಿದ್ದರು. ಆದರೆ ಮಹಿಳೆ ಸುಟ್ಟಗಾಯಗಳಾಗಿ ಮೃತಪಟ್ಟಿದ್ದು ನಿಗೂಢವಾಗಿದೆ. ಏತನ್ಮಧ್ಯೆ, ಬಾಂಧಿ ಇದು ತನ್ನ ವಿರುದ್ಧ ರಾಜಕೀಯ ಸಂಚು ಎಂದು ಆರೋಪಿಸಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments