Select Your Language

Notifications

webdunia
webdunia
webdunia
webdunia

ಲೋಕಸಭೆಯಿಂದ ಹೊರಗಿಡುವ ಬಿಜೆಪಿ ತಂತ್ರಕ್ಕೆ ಆಡ್ವಾಣಿ ತಿರುಗೇಟು

ಲೋಕಸಭೆಯಿಂದ ಹೊರಗಿಡುವ ಬಿಜೆಪಿ ತಂತ್ರಕ್ಕೆ ಆಡ್ವಾಣಿ ತಿರುಗೇಟು
ನವದೆಹಲಿ , ಸೋಮವಾರ, 27 ಜನವರಿ 2014 (19:01 IST)
PTI
ಬಿಜೆಪಿ ಪಕ್ಷದ ಹಿರಿಯ ನಾಯಕ ಎಲ್‌.ಕೆ.ಆಡ್ವಾಣಿಯವರನ್ನು ಲೋಕಸಭೆಯಿಂದ ಹೊರಗಿಟ್ಟು ರಾಜ್ಯಸಭೆಗೆ ವರ್ಗಾಯಿಸಿ ಯುವ ಸಂಸದರಿಗೆ ಅವಕಾಶ ನೀಡಬೇಕು ಎನ್ನುವ ಬಿಜೆಪಿ ತಂತ್ರಕ್ಕೆ ಆಡ್ವಾಣಿ ತಣ್ಣೀರು ಎರಚಿದ್ದಾರೆ.

ಆಡ್ವಾಣಿಗೆ 86 ವರ್ಷ ವಯಸ್ಸಾಗಿದ್ದು, ಮತ್ತೊಬ್ಬ ನಾಯಕ ಮುರಳಿ ಮನೋಹರ್ ಜೋಷಿಗೆ 80 ವರ್ಷ ವಯಸ್ಸಿನವರಾಗಿದ್ದಾರೆ. ನರೇಂದ್ರ ಮೋದಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿದ್ದರಿಂದ ಲೋಕಸಭೆಯಲ್ಲಿ ಯುವ ಸಂಸದರಿಗೆ ಹೆಚ್ಚಿನ ಆದ್ಯತೆ ನೀಡಬೇಕು. 75 ವರ್ಷಕ್ಕಿಂತ ಮೇಲ್ಪಟ್ಟ ನಾಯಕರಿಗೆ ರಾಜ್ಯಸಭೆಗೆ ಕಳುಹಿಸಬೇಕು ಎನ್ನುವ ತಂತ್ರವನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಹೆಣೆದಿದ್ದರು.

ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದಲ್ಲಿ ಹೆಚ್ಚಿನವರು ಯುವಕರಾಗಿದ್ದರಿಂದ ಸಂಸತ್ತಿನಲ್ಲಿ ಅಂತಹ ನಾಯಕರನ್ನು ಎದುರಿಸಲು ಆಡ್ವಾಣಿ, ಜೋಷಿಯಂತಹ ಹಿರಿಯ ನಾಯಕರನ್ನು ರಾಜ್ಯಸಭೆಗೆ ಕಳುಹಿಸುವ ಪ್ರಸ್ತಾವನೆಗೆ ಆರೆಸ್ಸೆಸ್ ಮತ್ತು ಬಿಜೆಪಿ ಕೂಡಾ ಬೆಂಬಲ ವ್ಯಕ್ತಪಡಿಸಿವೆ ಎನ್ನಲಾಗುತ್ತಿದೆ.

ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ತಂತ್ರವನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಆಡ್ವಾಣಿ ನನ್ನನ್ನು ರಾಜ್ಯಸಭೆಗೆ ಕಳುಹಿಸುವ ಬಗ್ಗೆ ಪಕ್ಷದ ಮುಖಂಡರು ಮಾಹಿತಿ ನೀಡಿಲ್ಲ. ಒಂದು ವೇಳೆ ಮಾಹಿತಿ ನೀಡಿದಲ್ಲಿ ಅದರ ಬಗ್ಗೆ ಚಿಂತನೆ ನಡೆಸುತ್ತೇನೆ ಎಂದು ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ತಿರುಗೇಟು ನೀಡಿದ್ದಾರೆ.

Share this Story:

Follow Webdunia kannada