Select Your Language

Notifications

webdunia
webdunia
webdunia
webdunia

ಬಂಗಾರಪ್ಪ 'ಕೈ' ಹಿಡಿಯದ ಕಾಂಗ್ರೆಸ್: ಏಕಾಂಗಿ ಸ್ಪರ್ಧೆ

ಬಂಗಾರಪ್ಪ 'ಕೈ' ಹಿಡಿಯದ ಕಾಂಗ್ರೆಸ್: ಏಕಾಂಗಿ ಸ್ಪರ್ಧೆ
ನವದೆಹಲಿ , ಶನಿವಾರ, 12 ಏಪ್ರಿಲ್ 2008 (20:55 IST)
ಕರ್ನಾಟಕದಲ್ಲಿ ನಡೆಯುವ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ, ಹಿರಿಯ ಮುಖಂಡ ಎಂ.ವೀರಪ್ಪ ಮೊಯಿಲಿ ತಿಳಿಸಿದ್ದಾರೆ.

ಇದೇ ವೇಳೆ, ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಮುಖಂಡ ಎಸ್.ಬಂಗಾರಪ್ಪ ಅವರು ಚುನಾವಣೆಗಳಲ್ಲಿ ಕಾಂಗ್ರೆಸ್ ಜತೆ ಕೈಜೋಡಿಸುವುದಕ್ಕಾಗಿ ಪಕ್ಷವನ್ನು ಸಂಪರ್ಕಿಸಿಲ್ಲ ಎಂದು ಹಿರಿಯ ಮುಖಂಡರೊಬ್ಬರು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಭಾನುವಾರ ನಡೆಯುವ ಸಭೆಯಲ್ಲಿ ಪ್ರದೇಶ ಕಾಂಗ್ರೆಸ್ ಚುನಾವಣಾ ಸಮಿತಿಯು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದ್ದು, ಪಕ್ಷದ ಪರಿಶೀಲನಾ ಸಮಿತಿಯು ಏ.14ರಂದು ಈ ಪಟ್ಟಿಯನ್ನು ಪರಾಮರ್ಶಿಸಲಿದೆ. ಪಟ್ಟಿ ಅಂತಿಮಗೊಳಿಸಲು ಏ.15ರಂದು ಕಾಂಗ್ರೆಸ್ ಕೇಂದ್ರೀಯ ಚುನಾವಣಾ ಸಮಿತಿಯು ಸಭೆ ಸೇರಲಿದೆ.

ಮೇ ತಿಂಗಳಲ್ಲಿ ನಡೆಯುವ ಚುನಾವಣೆಗಳಿಗೆ ಸಿದ್ಧತೆ ನಡೆಸಿರುವ ಕಾಂಗ್ರೆಸ್, ಚುನಾವಣಾ ಕಾರ್ಯತಂತ್ರ ರೂಪಿಸಲು ಹಿರಿಯ ಮುಖಂಡರಾದ ವಯಲಾರ್ ರವಿ, ಜೈರಾಮ್ ರಮೇಶ್ ಮತ್ತು ಕಪಿಲ್ ಸಿಬಾಲ್ ಅವರನ್ನು ನಿಯೋಜಿಸಿದೆ.

Share this Story:

Follow Webdunia kannada