ತಿರುಪತಿ ವೆಂಕಟೇಶ್ವರನ ಸನ್ನಿಧಿಯಲ್ಲಿ ಬ್ರಹ್ಮೋತ್ಸವ ವೈಭವ
ಭೂಲೋಕದ ವೈಕುಂಠ ಎಂದೇ ಜನಜನಿತವಾಗಿರುವ ಪರಮ ಪವಿತ್ರ ತಾಣ ತಿರುಪತಿಯ ತಿರುಮಲ ಶ್ರೀನಿವಾಸನ ಸನ್ನಿಧಿಯಲ್ಲಿ ವಾರ್ಷಿಕ ವಾರ್ಷಿಕ ಬ್ರಹ್ಮೋತ್ಸವವು ಸೆ.29ರಿಂದ ಆರಂಭವಾಗಿ ಒಂಭತ್ತು ದಿನಗಳ ಪರ್ಯಂತ ನಡೆಯಲಿದೆ.ತಿರುಮಲಗಿರಿಯಲ್ಲಿ ಕನ್ಯಾಮಾಸದ ಶ್ರವಣ ನಕ್ಷತ್ರ ದಿನ ಭಗವಾನ್ ಶ್ರೀನಿವಾಸನು ವಿಶೇಷವಾಗಿ ತಿರುಮಲಗಿರಿಯಲ್ಲಿ ಆರೂಢನಾಗಿರುತ್ತಾನೆ ಎಂಬ ಪ್ರತೀತಿ. ಚಾಂದ್ರಮಾನದ ಪ್ರಕಾರ ಆ ದಿನ ವಿಜಯ ದಶಮಿ ಆಗಿರುತ್ತದೆ.ಬ್ರಹ್ಮೋತ್ಸವ ಪ್ರಯುಕ್ತ ಪ್ರತಿ ದಿನ ನಡೆಯುವ ಕಾರ್ಯಕ್ರಮಗಳ ವಿವರ ಈ ರೀತಿ ಇದೆ. ದಿನಾಂಕ | ಬೆಳಗ್ಗೆ | ಸಂಜೆ |
ಸೆ. 29 | ಧ್ವಜಾರೋಹಣ | ದೊಡ್ಡ (ಪೆದ್ದ)ಶೇಷ ವಾಹನ |
ಸೆ. 30 | ಚಿನ್ನ(ಚಿಕ್ಕ) ಶೇಷ ವಾಹನ | ಹಂಸ ವಾಹನ |
ಅ.1 | ಚಿನ್ನ(ಚಿಕ್ಕ) ಶೇಷ ವಾಹನ | ಮುತ್ಯಾಪು ಪುಂದಿರಿ ವಾಹನ |
ಅ. 2 | ಕಲ್ಪವೃಕ್ಷ ವಾಹನ | ಸರ್ವ ಭೂಪಾಲ ವಾಹನ |
ಅ. 4 | ಹನುಮಂತ ವಾಹನ | ಸಂಜೆ ಸ್ವರ್ಣ ರಥ |
ಅ. 5 | ಸೂರ್ಯಪ್ರಭ ವಾಹನ | ಚಂದ್ರ ಪ್ರಭ ವಾಹನ |
ಅ. 6 | ರಥೋತ್ಸವ | ಅಶ್ವ ವಾಹನ |
ಅ. 7 | ಪಲ್ಲಕ್ಕಿ ಉತ್ಸವ, ಚಕ್ರ ಸ್ನಾನ | ಬಂಗಾರು ತಿರುಚ್ಚಿ ಉತ್ಸವ, ಧ್ವಜಾವರೋಹಣ |