Select Your Language

Notifications

webdunia
webdunia
webdunia
webdunia

ಅಕ್ಷರ ಜಾತ್ರೆ-ಐಟಿ-ಬಿಟಿಯವರಲ್ಲಿ ಕೈ ಚಾಚಲ್ಲ: ನಲ್ಲೂರು ನುಡಿ

ಅಕ್ಷರ ಜಾತ್ರೆ-ಐಟಿ-ಬಿಟಿಯವರಲ್ಲಿ ಕೈ ಚಾಚಲ್ಲ: ನಲ್ಲೂರು ನುಡಿ
ಬೆಂಗಳೂರು , ಸೋಮವಾರ, 7 ಫೆಬ್ರವರಿ 2011 (16:05 IST)
ಸಮ್ಮೇಳನ ನಡೆಸಲು ನಾವು ಕಸ ಗುಡಿಸೋರ ಬಳಿ ಕೈ ಚಾಚುತ್ತೇವೆಯೇ ವಿನಾ ಐಟಿ-ಬಿಟಿಯವರ ಹತ್ತಿರ ಕೈ ಚಾಚಲ್ಲ. ಈ ಸಮ್ಮೇಳನದಲ್ಲಿ ಅದನ್ನು ನಾವು ಮಾಡಿ ತೋರಿಸಿದ್ದೇವೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಲ್ಲೂರು ಪ್ರಸಾದ್ ಖಾರವಾಗಿಯೇ ನುಡಿದಿದ್ದಾರೆ.

77ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮಿಂದ ಅವರು ಬದುಕಬೇಕೇ ಹೊರತು ಅವರಿಂದ ನಾವಲ್ಲ. ಕಂಪ್ಯೂಟರ್, ಲ್ಯಾಪ್‌ಟಾಪ್‌ಗಳಿಂದ ಬತ್ತ, ಬದನೆ, ಬೂದುಗುಂಬಳ ಬೆಳೆಯಕ್ಕಾಗಲ್ಲ ಎಂದು ಅವರು ಲೇವಡಿ ಮಾಡಿದರು.

ಐಟಿ ಬಿಟಿ ಮಂದಿ ಸಹಾಯ ಮಾಡಲಿಲ್ಲ ಎಂದು ನಮಗೇನೂ ಬೇಸರವಿಲ್ಲ. ಅವರಿಗೂ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ ಎಂದರು. ಹಣಕಾಸಿನ ವಿವರ ನೀಡಿದ ಅವರು ಸಮ್ಮೇಳನಕಕ್ಕೆ ಹಣ ಸಹಾಯ ಮಾಡಿದ ಸಂಘ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು. ಇನ್ನೂ ಎರಡು ಕೋಟಿ ರೂಪಾಯಿಯಷ್ಟು ಹಣ ಸರ್ಕಾರಿ ನೌಕರರ ಸಂಘದಿಂದ ಬರುವ ನಿರೀಕ್ಷೆ ಇದೆ. ಅಷ್ಟು ಬಂದರೆ ಸಾಕಾಗುತ್ತದೆ ಎಂದು ಅವರು ಹೇಳಿದರು.

Share this Story:

Follow Webdunia kannada