Select Your Language

Notifications

webdunia
webdunia
webdunia
webdunia

ಸ್ವಾಮೀಜಿಗಳು ಸಿಎಂ ಮೇಲೆ ಆ ರೀತಿ ಒತ್ತಡ ಹಾಕಿದ್ದು ತಪ್ಪು-ಸಿಎಂ ಪರ ಬ್ಯಾಟ್ ಬೀಸಿದ ಕಾಂಗ್ರೆಸ್ ನಾಯಕ

ಸ್ವಾಮೀಜಿಗಳು ಸಿಎಂ ಮೇಲೆ ಆ ರೀತಿ ಒತ್ತಡ ಹಾಕಿದ್ದು ತಪ್ಪು-ಸಿಎಂ ಪರ ಬ್ಯಾಟ್ ಬೀಸಿದ ಕಾಂಗ್ರೆಸ್ ನಾಯಕ
ಬೆಂಗಳೂರು , ಗುರುವಾರ, 16 ಜನವರಿ 2020 (08:23 IST)
ಬೆಂಗಳೂರು : ಹರಿಹರದಲ್ಲಿ ನಡೆದ ಕಾರ್ಯಕ್ರದಲ್ಲಿ  ಸಿಎಂ ಯಡಿಯೂರಪ್ಪ ಮೇಲೆ ವಚನಾನಂದ ಸ್ವಾಮೀಜಿಗಳು ಒತ್ತಡ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಸಿಎಂ ಪರವಾಗಿ ಬ್ಯಾಟ್ ಬೀಸಿದ್ದಾರೆ.



ಈ ಬಗ್ಗೆ ಮಾತನಾಡಿದ ಅವರು, ಸ್ವಾಮೀಜಿಗಳು ಆ ರೀತಿ ಒತ್ತಡ ಹಾಕುವುದು ತಪ್ಪು. ಒಂದು ಸಮಾಜ ನಿಮ್ಮ ಕೈ ಬಿಡುತ್ತದೆ ಎಂದು ಸ್ವಾಮೀಜಿ ಹೇಳಿದ್ದು ಸರಿಯಲ್ಲ. ಇದರಿಂದ ಸಿಎಂ ಕೆರಳಿದ್ದಾರೆ ಎಂದು ಹೇಳಿದ್ದಾರೆ.


ಅಲ್ಲದೇ  ಯಡಿಯೂರಪ್ಪಗೆ ಎರಡೂ ಕಡೆಗಳಿಂದ ಒತ್ತಡವಿದೆ. ಒತ್ತಡದಿಂದಾಗಿ ರಾಜ್ಯದ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಅವರು ಸಿಎಂ ಆಗಿ ಇಷ್ಟು ತಿಂಗಳಾಯ್ತು. ಇಲ್ಲಿಯವರೆಗೆ ಅಧಿವೇಶನ ಪೂರ್ಣ ಪ್ರಮಾಣದಲ್ಲಿ ನಡೆಸಿಯೇ ಇಲ್ಲ ಎಂದು ಅವರು ತಿಳಿಸಿದ್ದಾರೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ಭಯ ಪ್ರಕರಣ; ಅಪರಾಧಿಗಳ ಗಲ್ಲುಶಿಕ್ಷೆ ದಿನಾಂಕ ಮುಂದೂಡಿಕೆ