Select Your Language

Notifications

webdunia
webdunia
webdunia
webdunia

ಹಾಲಿ ಶಾಸಕರಿಗೆ ಟಿಕೆಟ್ ನೀಡದಿರಲು ಬಿಜೆಪಿ ಚಿಂತನೆ

ಹಾಲಿ ಶಾಸಕರಿಗೆ ಟಿಕೆಟ್ ನೀಡದಿರಲು ಬಿಜೆಪಿ ಚಿಂತನೆ
, ಗುರುವಾರ, 20 ಫೆಬ್ರವರಿ 2014 (14:32 IST)
PR
PR
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಹಾಲಿ ಶಾಸಕರಿಗೆ ಮತ್ತು ವಿಧಾನಪರಿಷತ್ ಸದಸ್ಯರಿಗೆ ಟಿಕೆಟ್ ನೀಡದಿರಲು ಬಿಜೆಪಿ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗಿದೆ. ಹಾಲಿ ಶಾಸಕರಿಗೆ ಟಿಕೆಟ್ ನೀಡುವುದರಿಂದ ಆ ಕ್ಷೇತ್ರದಲ್ಲಿ ಖಾಲಿಯಾದ ಸ್ಥಾನದಲ್ಲಿ ಮತ್ತೆ ಬಿಜೆಪಿ ಗೆಲ್ಲುವುದು ಕಷ್ಟವಾಗುತ್ತದೆ ಎಂಬ ಆತಂಕ ಬಿಜೆಪಿಗೆ ಕಾಡಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ನೀಡದಿರುವ ಚಿಂತನೆ ನಡೆಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಬೆಂಗಳೂರಿನ ಮಲ್ಲೇಶ್ವರಂ ಕಚೇರಿಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.

ಬಿಎಸ್. ಯಡಿಯೂರಪ್ಪನವರಿಗೆ ಮತ್ತು ಜೂನ್‌ನಲ್ಲಿ ವಿಧಾನಪರಿಷತ್ ಅವಧಿ ಮುಗಿಯುವ ಡಿ.ವಿ.ಸದಾನಂದ ಗೌಡರಿಗೆ ಮಾತ್ರ ಟಿಕೆಟ್ ನೀಡುವುದು ಖಚಿತವಾಗಿದೆ. ಯಡಿಯೂರಪ್ಪ ಶಿವಮೊಗ್ಗ ಕ್ಷೇತ್ರದಲ್ಲಿ ಕಣಕ್ಕಿಳಿಯುವುದು ಖಚಿತವಾಗಿದ್ದು, ಡಿವಿಎಸ್‌ ಕ್ಷೇತ್ರ ಇನ್ನೂ ನಿರ್ಧರಿಸಿಲ್ಲ. ಶಾಸಕರಿಗೆ ಟಿಕೆಟ್ ನಿರಾಕರಣೆಯಿಂದಾಗಿ ಲೋಕಸಭೆಗೆ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷೆ ಹೊಂದಿದ್ದ ಅನೇಕ ಶಾಸಕರಿಗೆ ನಿರಾಶೆಯಾಗಿದೆ. ಮಾಜಿ ಡಿಸಿಎಂ ಆರ್.ಅಶೋಕ್, ಸಿಟಿ ರವಿ, ಅಪ್ಪಚ್ಚು ರಂಜನ್, ವೈ.ನಾರಾಯಣ ಸ್ವಾಮಿ ಮುಂತಾದವರಿಗೆ ಲೋಕಸಭೆ ಚುನಾವಣೆ ಟಿಕೆಟ್‌ನಿಂದ ವಂಚಿತರಾಗಲಿದ್ದಾರೆ.

Share this Story:

Follow Webdunia kannada