Select Your Language

Notifications

webdunia
webdunia
webdunia
webdunia

ಇಂದು ಕೋಲಾರ, ಮೈಸೂರಿನಲ್ಲಿ ಸೋನಿಯಾ ಚುನಾವಣೆ ಪ್ರಚಾರ

ಇಂದು ಕೋಲಾರ, ಮೈಸೂರಿನಲ್ಲಿ ಸೋನಿಯಾ ಚುನಾವಣೆ ಪ್ರಚಾರ
, ಬುಧವಾರ, 9 ಏಪ್ರಿಲ್ 2014 (12:39 IST)
PR
PR
ಕೋಲಾರ: ಸೋನಿಯಾ ಗಾಂಧಿ ಇಂದು ಮೊದಲಿಗೆ ಕೋಲಾರಕ್ಕೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪ ಪರ ಮತಯಾಚನೆ ಮಾಡಿದರು. ಕೆ.ಎಚ್. ಮುನಿಯಪ್ಪ ಅವರೇ ಸ್ಥಳಕ್ಕೆ ಆಗಮಿಸಿ ಭದ್ರತೆ ಉಸ್ತುವಾರಿಯನ್ನು ನೋಡಿಕೊಂಡಿದ್ದರು. ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್ ಮುಂತಾದವರು ಸೋನಿಯಾ ಅವರಿಗೆ ಸಾಥ್ ನೀಡಿದರು. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬುದ್ದಿ ಕಲಿಸಿದ್ದೀರಿ. ಬಿಜೆಪಿ ಸಿಎಂ ಸೇರಿ ಸಚಿವರೆಲ್ಲರೂ ಲೂಟಿ ಮಾಡಿ ಜೈಲಿಗೆ ಹೋದ್ರು ಎಂದು ಪ್ರಚಾರ ಭಾಷಣದಲ್ಲಿ ಸೋನಿಯಾ ಹೇಳಿದರು. ಕನ್ನಡದಲ್ಲಿ ಮೊದಲಿಗೆ ಸೋನಿಯಾ ಭಾಷಣ ಆರಂಭಿಸಿದರು.

ಕೋಲಾರದಲ್ಲಿ ಚುನಾವಣೆ ಪ್ರಚಾರದ ಬಳಿಕ ಮೈಸೂರು ಮಹಾರಾಜ ಕಾಲೇಜಿನ ಮೈದಾನದಲ್ಲಿ ಹೆಲಿಪ್ಯಾಡ್ ವ್ಯವಸ್ಥೆ ಮಾಡಲಾಗಿದ್ದು, ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಅಭ್ಯರ್ಥಿ ವಿಶ್ವನಾಥ್ ಪರ ಪ್ರಚಾರಕ್ಕೆ ಸಮಾವೇಶ ಹಮ್ಮಿಕೊಂಡಿದ್ದಾರೆ.ಸೋನಿಯಾ ಗಾಂಧಿ ಸ್ವಾಗತಕ್ಕೆ ಮೈಸೂರಿನಲ್ಲಿ ಭರ್ಜರಿ ಸಿದ್ಧತೆ ಮಾಡಲಾಗುತ್ತಿದೆ. ಸೋನಿಯಾ ಪ್ರಚಾರದಿಂದ ಕೋಲಾರ ಮತ್ತು ಮೈಸೂರಿನಲ್ಲಿ ಕಾಂಗ್ರೆಸ್ ಪ್ರಚಾರಕ್ಕೆ ಇನ್ನಷ್ಟು ರಂಗುತುಂಬಬಹುದು ಎಂದು ಭಾವಿಸಲಾಗಿದೆ.

Share this Story:

Follow Webdunia kannada