ಪಂಚಭೂತಗಳಲ್ಲಿ ಲೀನವಾದ ವೈಶಾಲಿ ಕಾಸರವಳ್ಳಿ
, ಮಂಗಳವಾರ, 28 ಸೆಪ್ಟಂಬರ್ 2010 (19:16 IST)
ಮೂಡಲ ಮನೆಯ ಮುತ್ತು ವೈಶಾಲಿ ಕಾಸರವಳ್ಳಿ ತಮ್ಮ ಬದುಕಿನ ಪಯಣ ಮುಗಿಸಿ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಅವರ ಅಂತ್ಯಕ್ರಿಯೆ ಮಂಗಳವಾರ ಸಂಜೆ (ಸೆ.28) ಬನಶಂಕರಿಯ ಚಿತಾಗಾರದಲ್ಲಿ ನೆರವೇರಿತು.ಮಧ್ಯಾಹ್ನ 12 ಗಂಟೆಯಿಂದ ಸುಮಾರು ಮೂರು ಗಂಟೆಯವರೆಗೆ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗ ಮಂದಿರದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಅವರ ಬಂಧು ಮಿತ್ರರು, ಚಿತ್ರರಂಗದ ಗಣ್ಯರು, ಅಭಿಮಾನಿಗಳು ನೆರೆದು ಕಂಬನಿ ಮಿಡಿದರು.ತನ್ನ ಮಕ್ಕಳಿಬ್ಬರಿಗೂ ಮದುವೆ ಮಾಡಬೇಕು ಎಂಬ ಕನಸು ಹೊತ್ತಿದ್ದ ವೈಶಾಲಿ ಕನಸು ನನಸಾಗುವ ಮುನ್ನವೇ ಅವರು ಮರೆಯಾಗಿದ್ದಾರೆ. ಜೊತೆಗೆ ಎಸ್.ಎಲ್. ಭೈರಪ್ಪ ಅವರ ನಿರಾಕರಣ ಕಾದಂಬರಿಯನ್ನು ಚಿತ್ರ ಮಾಡಿ ನಿರ್ದೇಶಿಸಬೇಕೆಂಬ ಕನಸು ಹೊತ್ತಿದ್ದರು. ಆದರೆ ಆ ಕನಸೂ ಕೂಡಾ ಕನಸಾಗಿಯೇ ಉಳಿದಿದೆ. ಪತಿ ಗಿರೀಶ್ ಕಾಸರವಳ್ಳಿ ಅವರ ಹಲವಾರು ಚಿತ್ರಗಳಲ್ಲಿ ಅವರು ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡುವ ಜೊತೆಗೆ ಹಲವಾರು ಪ್ರಶಸ್ತಿಗಳಿಗೂ ಭಾಜನರಾಗಿದ್ದರು.ಸಂಬಂಧಪಟ್ಟ ಸುದ್ದಿಗಳು-ಅಗಲಿದ ತಾರೆ ವೈಶಾಲಿ ಕಾಸರವಳ್ಳಿ: ಸಂಜೆ ಅಂತ್ಯ ಸಂಸ್ಕಾರ ಪ್ರತಿಭಾವಂತ ನಟಿ, ನಿರ್ದೇಶಕಿ ವೈಶಾಲಿ ಕಾಸರವಳ್ಳಿ ಇನ್ನಿಲ್ಲ ವೈಶಾಲಿ ಕಾಸರವಳ್ಳಿ ಅವರ ಚಿತ್ರ ಜೀವನದ ಫೋಟೋಗಳು ಹಾಗೂ ಅವರ ಅಂತಿಮ ಯಾತ್ರೆಯ ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...
ಯಾರಿಗೂ ಹೇಳ್ಬೇಡಿ ಚಿತ್ರದಲ್ಲಿ ಗಿರಿಜಾ ಲೋಕೇಶ್, ವಿನಯಾ ಪ್ರಸಾದ್, ಸತ್ಯಭಾಮಾ ಜೊತೆ ವೈಶಾಲಿ ಕಾಸರವಳ್ಳಿವೈಶಾಲಿ ಕಾಸರವಳ್ಳಿ ಅವರ ಚಿತ್ರ ಜೀವನದ ಫೋಟೋಗಳು ಹಾಗೂ ಅವರ ಅಂತಿಮ ಯಾತ್ರೆಯ ಫೋಟೋಗಳಿಗಾಗಿ ಮುಂದೆ ಕ್ಲಿಕ್ ಮಾಡಿ...