Webdunia - Bharat's app for daily news and videos

Install App

ತಮಿಳುನಾಡು: ಪುತ್ರ ಅಳಗಿರಿಗೆ ಕೊಕ್ ನೀಡಿದ ಕರುಣಾನಿಧಿ

Webdunia
ಶುಕ್ರವಾರ, 14 ಮಾರ್ಚ್ 2014 (17:10 IST)
PR
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ 40 ಜನರ ಅಭ್ಯರ್ಥಿಗಳ ಪಟ್ಟಿಯನ್ನು ಡಿಎಂಕೆ ಅಧ್ಯಕ್ಷ ಎಂ ಕರುಣಾನಿಧಿ ಸೋಮವಾರ ಬಿಡುಗಡೆ ಮಾಡಿದ್ದಾರೆ.

ಮಾಜಿ ಕೇಂದ್ರ ಸಚಿವರಾಗಿದ್ದ, ಟಿ.ಆರ್ ಬಾಲು, ದಯಾನಿದಿ ಮಾರನ್, ಎ ರಾಜಾ, ಎಸ್ ಜಗತ್ರಾಕ್ಷಕನ್ ಮತ್ತು ಎಸ್ ಗಾಂಧಿ ಸೆಲ್ವನ್ ಅವರಿಗೆ ಮತ್ತೆ ಟಿಕೆಟ್ ನೀಡಿದ್ದು, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

2 ಜಿ ಹಗರಣದಲ್ಲಿ ರಾಜ ಮತ್ತು ದಯಾನಿಧಿ ಮಾರನ್ ಹೆಸರು ಕೇಳಿಬಂದಿತ್ತು, ಇಷ್ಟಾದರೂ ಇಬ್ಬರಿಗೂ ಚುನಾವಣೆಯಲ್ಲಿ ಸ್ಫರ್ಧಿಸಲು ಕರುಣಾನಿಧಿ ಟಿಕೆಟ್ ನೀಡಿದ್ದಾರೆ. ಆದರೆ ಕನಿಮೊಳಿ ಮತ್ತು ಮಗ ಅಳಗಿರಿಗೆ ಟಿಕೆಟ್ ನೀಡದೆ ಕೈಬಿಡಲಾಗಿದೆ ಎಂದು ತಿಳಿದು ಬಂದಿದೆ.

ತಂಜಾವೂರ್ ಕ್ಷೇತ್ರದಿಂದ ಟಿ ಆರ್ ಬಾಲು, ಚೈನ್ನೈನ ಕೇಂದ್ರ ಭಾಗದಿಂದ ದಯಾನಿಧಿ ಮಾರನ್, ನಿಲಿಗೀರಸ್ ಕ್ಷೇತ್ರದಿಂದ ಎ ರಾಜಾ, ಚೈನ್ನೈ ಉತ್ತರ ಕ್ಷೇತ್ರದಿಂದ ಆರ್ ಗಿರಿರಾಜನ್, ಚೈನ್ನೈ ದಕ್ಷಿಣ ಕ್ಷೇತ್ರದಿಂದ ಟಿಕೆಎಸ್ ಎಲಾಂಗಾವನ್ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಒಟ್ಟು 40 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments