Select Your Language

Notifications

webdunia
webdunia
webdunia
webdunia

ತಮಿಳುನಾಡು: ಪುತ್ರ ಅಳಗಿರಿಗೆ ಕೊಕ್ ನೀಡಿದ ಕರುಣಾನಿಧಿ

ತಮಿಳುನಾಡು: ಪುತ್ರ ಅಳಗಿರಿಗೆ ಕೊಕ್ ನೀಡಿದ ಕರುಣಾನಿಧಿ
, ಶುಕ್ರವಾರ, 14 ಮಾರ್ಚ್ 2014 (17:10 IST)
PR
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ 40 ಜನರ ಅಭ್ಯರ್ಥಿಗಳ ಪಟ್ಟಿಯನ್ನು ಡಿಎಂಕೆ ಅಧ್ಯಕ್ಷ ಎಂ ಕರುಣಾನಿಧಿ ಸೋಮವಾರ ಬಿಡುಗಡೆ ಮಾಡಿದ್ದಾರೆ.

ಮಾಜಿ ಕೇಂದ್ರ ಸಚಿವರಾಗಿದ್ದ, ಟಿ.ಆರ್ ಬಾಲು, ದಯಾನಿದಿ ಮಾರನ್, ಎ ರಾಜಾ, ಎಸ್ ಜಗತ್ರಾಕ್ಷಕನ್ ಮತ್ತು ಎಸ್ ಗಾಂಧಿ ಸೆಲ್ವನ್ ಅವರಿಗೆ ಮತ್ತೆ ಟಿಕೆಟ್ ನೀಡಿದ್ದು, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

2ಜಿ ಹಗರಣದಲ್ಲಿ ರಾಜ ಮತ್ತು ದಯಾನಿಧಿ ಮಾರನ್ ಹೆಸರು ಕೇಳಿಬಂದಿತ್ತು, ಇಷ್ಟಾದರೂ ಇಬ್ಬರಿಗೂ ಚುನಾವಣೆಯಲ್ಲಿ ಸ್ಫರ್ಧಿಸಲು ಕರುಣಾನಿಧಿ ಟಿಕೆಟ್ ನೀಡಿದ್ದಾರೆ. ಆದರೆ ಕನಿಮೊಳಿ ಮತ್ತು ಮಗ ಅಳಗಿರಿಗೆ ಟಿಕೆಟ್ ನೀಡದೆ ಕೈಬಿಡಲಾಗಿದೆ ಎಂದು ತಿಳಿದು ಬಂದಿದೆ.

ತಂಜಾವೂರ್ ಕ್ಷೇತ್ರದಿಂದ ಟಿ ಆರ್ ಬಾಲು, ಚೈನ್ನೈನ ಕೇಂದ್ರ ಭಾಗದಿಂದ ದಯಾನಿಧಿ ಮಾರನ್, ನಿಲಿಗೀರಸ್ ಕ್ಷೇತ್ರದಿಂದ ಎ ರಾಜಾ, ಚೈನ್ನೈ ಉತ್ತರ ಕ್ಷೇತ್ರದಿಂದ ಆರ್ ಗಿರಿರಾಜನ್, ಚೈನ್ನೈ ದಕ್ಷಿಣ ಕ್ಷೇತ್ರದಿಂದ ಟಿಕೆಎಸ್ ಎಲಾಂಗಾವನ್ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಒಟ್ಟು 40 ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada