Webdunia - Bharat's app for daily news and videos

Install App

ಸಾಹಸಸಿಂಹ ವಿಷ್ಣುವರ್ಧನ್‌

Webdunia
ಗುರುವಾರ, 2 ಆಗಸ್ಟ್ 2007 (16:55 IST)
ಸುಮಾರು ಮೂರು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ನೆಲೆ ನಿಂತ ಅಭಿಜಾತ ಕಲಾವಿದ ಡಾ. ವಿಷ್ಣುವರ್ಧನ್ ಅವರಿಂದ ಕನ್ನಡ ಚಿತ್ರರಂಗ ಶ್ರೀಮಂತವಾಗಿದೆ.

ಚಿತ್ರರಸಿಕರಿಗಾಗಿ ಅವರು ನೀಡಿದ ಅನೇಕ ಚಿತ್ರಗಳಲ್ಲಿ ಇನ್ನು ಕೇಲವೊಂದು ಅಷ್ಟೆ ನಿತ್ಯ ನೂತನ ಬಂಧನ, ನಿಷ್ಕರ್ಷ,ಮಲಯ ಮಾರುತ, ಸುಪ್ರಭಾತ, ಮುತ್ತಿನ ಹಾರ, ಸೂರ್ಯವಂಶ, ಮತ್ತು ಮೊನ್ನೆ ಬಿಡುಗಡೆಯಾಗಿದೆ ಅನ್ನಬಹುದಾದ ವೀರಪ್ಪ ನಾಯಕ ಅವರ ಅಭಿನಯ ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯಬಹುದು.

ವಿಷ್ಣು ಅಭಿನಯಿಸಿದ ಹರಕೆಯ ಕುರಿ ಮತ್ತು ಮುತ್ತಿನ ಹಾರ ಚಿತ್ರಗಳು ಪ್ರಾದೇಶಿಕ ವಿಭಾಗದಲ್ಲಿ ಅತ್ಯುತ್ತಮ ಚಿತ್ರಗಳು ಎಂದು ರಾಷ್ಟ್ರ ಪ್ರಶಸ್ತಿ ಪಡೆದಿವೆ.

1972 ರಲ್ಲಿ ವಂಶ ವೃಕ್ಷದಲ್ಲಿ ಅಭಿನಯಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ವಿಷ್ಣುವರ್ಧನ್ ಅವರು ಇಲ್ಲಿಯವರೆಗೆ ಕನ್ನಡದಲ್ಲಿ ಸುಮಾರು 194, ತಮಿಳಿನಲ್ಲಿ 5, ತೆಲುಗಿನಲ್ಲಿ 4, ಮಲಯಾಳಂನಲ್ಲಿ 2 ಮತ್ತು ಹಿಂದಿಯಲ್ಲಿ 4 ಚಿತ್ರಗಳಲ್ಲಿ ನಟಿಸುವ ಮೂಲಕ ಪಂಚಭಾಷಾ ತಾರೆ ಎಂದು ಗುರುತಿಸಿಕೊಂಡಿರುವ ಕನ್ನಡದ ಹಿರಿಯ ನಟರಲ್ಲಿ ಮೊದಲಿಗರು ಇವರ ನಂತರದ ಸ್ಥಾನ ರಮೇಶರದು.

ಕನ್ನಡಿಗರಿಂದ ಅಭಿನವ ಭಾರ್ಗವ ಎಂದು ಕರೆಸಿಕೊಂಡ ವಿಷ್ಣು ಅಭಿನಯದ ವಿಸ್ತಾರ ಕೂಡ ಅಷ್ಟೆ ಆಳ. ಭಾವನಾತ್ಮಕ ಮತ್ತು ಹೋರಾಟದ ದೃಶ್ಯಗಳು ಪ್ರೇಕ್ಷಕರ ಮೇಲೆ ಗಾಢವಾದ ಪರಿಣಾಮ ಬೀರುತ್ತವೆ. ಉದಾರಣೆಗೆ ಬಂಧನದ ಡಾ. ಹರೀಶ ಮತ್ತು ಸುನಿಲ್ ಕುಮಾರ್ ದೇಸಾಯಿ ಅವರ ನಿಷ್ಕರ್ಷದಲ್ಲಿನ ಕಮಾಂಡೊ ಪಾತ್ರ ಮುತ್ತಿನ ಹಾರದ ಅಚ್ಚಪ್ಪನ ಪಾತ್ರ ಹೀಗೆ ಹತ್ತು ಹಲವು ಪಾತ್ರಗಳಲ್ಲಿ ಅಭಿನಯದ ಸೋಗಡನ್ನು ಕನ್ನಡ ಚಿತ್ರರಂಗಕ್ಕೆ ವಿಷ್ಣುವರ್ಧನ್ ನೀಡಿದ್ದಾರೆ

ಸಾಹಸಸಿಂಹ...
ಗಿರೀಶ್‌ ಕಾರ್ನಾಡರ ವಂಶವೃಕ್ಷದೊಂದಿಗೆ ಚಿತ್ರರಂಗದ ಪ್ರವೇಶವಾಯಿತು ಆದರೂ ನಾಯಕನಾಗಿ ಬಡ್ತಿ ಹೊಂದಿದ್ದು ಪುಟ್ಟಣ್ಣ ಕಣಗಾಲ್‌ ನಿರ್ಧೇಶನದ ನಾಗರ ಹಾವು ಚಿತ್ರದ ರಾಮಾಚಾರಿಯ ಮೂಲಕ.ಇದೇ ಚಿತ್ರದಲ್ಲಿ ಅವರ ಕಾಲೇಜು ಸಹಪಾಟಿ ಅಪ್ತಮಿತ್ರ ಅಂಬರೀಷ ಕೂಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಜನನ ಮತ್ತು ಜೀವನ: ಸಪ್ಟಂಬರ್ 18, 1950ರಲ್ಲಿ ದಿವಂಗತ ಎಚ್ ಎಲ್ ನಾರಾಯಣರಾವ್ ಹಾಗೂ ದಿವಂಗತ ಕಾನಾಕ್ಷಮ್ಮ ಅವರ ಎರಡನೆ ಮಗನಾಗಿ ಮೈಸೂರಿನಲ್ಲಿ ಜನನ. ಪ್ರಾಥಮಿಕ ಶಿಕ್ಷಣ ಪಡೆದದ್ದು ಗೋಪಾಲ ಸ್ವಾಮಿ ಶಾಲೆಯಲ್ಲಿ, ಕಾಲೇಜು ಶಿಕ್ಷಣ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಆಯಿತು.

ಚಿತ್ರರಂಗಕ್ಕೆ ಕಾಲಿಟ್ಟ ಮೂರು ವರುಷಗಳ ನಂತರ ಫೆಬ್ರುವರಿ 27, 1975 ರಲ್ಲಿ ಕನ್ನಡದ ಚಿತ್ರ ನಟಿ ಭಾರತಿಯನ್ನು ವಿವಾಹವಾದರು.ಬ್ರಹ್ಮ ಕೆಲವೊಂದು ಬಾರಿ ವಿಚಿತ್ರ ಹಣೆ ಬರಹ ಬರೆದಿರುತ್ತಾನೆ ಇನ್ನೇನು ಜೀವನ ಉತ್ತುಂಗದತ್ತ ಸಾಗುತ್ತಿದೆ ಅಂದುಕೊಳ್ಳುವಷ್ಟರಲ್ಲಿ ಮಗ್ಗಲು ಮುಳ್ಳೊಂದನ್ನು ಹುಟ್ಟಿಕೊಂಡುಬಿಟ್ಟಿರುತ್ತದೆ.

ವಿಷ್ಣು ಜೀವನದಲ್ಲಿಯೂ ಇದೇ ಆಗಿದ್ದು, ಗಂಧದ ಗುಡಿ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಆದ ಒಂದು ಅವಗಢ ಮೇಲಾಗಿ ಮಾಧ್ಯಮದ ತಪ್ಪು ಅಭಿಪ್ರಾಯದ ಪ್ರಚಾರ ವಿಷ್ಣುವಿನ ಇಡಿ ಜೀವನವನ್ನು ಹೋರಾಟದ ಹಾದಿಗೆ ತಂದು ನಿಲ್ಲಿಸಿದ್ದು ಇತಿಹಾಸ, ಮತ್ತು ಆ ಯುದ್ದದಲ್ಲಿ ಅವರು ಗೆದ್ದದ್ದು ಅತಿ ದೊಡ್ಡ ಇತಿಹಾಸ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ಮರ್ಡರ್ ಕೇಸ್: ನಟ ದರ್ಶನ್ ಗೆ ಇಂದು ಮಹತ್ವದ ದಿನ

ನಟರು ದೇವಲೋಕದಿಂದ ಇಳಿದು ಬಂದವರಾ… ಏರ್ ಪೋರ್ಟ್ ನಲ್ಲಿ ಅಲ್ಲು ಅರ್ಜುನ್ ವರ್ತನೆಗೆ ಟೀಕೆ Video

ಕೇರಳಕ್ಕೆ ಮರಳುವ ದಾರಿ ತಪ್ಪಿದ್ದ ಮಮ್ಮುಟ್ಟಿ: ಸಹಾಯಕ್ಕೆ ಬಂದ ಸ್ಥಳೀಯನಿಗೆ ಮಾಡಿದ್ದೇನು ನೋಡಿ Video

ನಿಷೇಧಿತ ಉತ್ಪನ್ನಗಳಿಗೆ ಪ್ರಚಾರ: ಬಾಲಿವುಡ್‌ ಸ್ಟಾರ್‌ ಶಾರುಖ್, ದೇವಗನ್, ಟೈಗರ್ ಶ್ರಾಫ್‌ಗೆ ಪೋಕಾಸ್‌ ನೋಟಿಸ್

ಶೂಟಿಂಗ್ ಸ್ಥಳಕ್ಕೆ ಹೋಗುವಾಗ ದಾರಿ ತೋರಿಸಿದ ವ್ಯಕ್ತಿ, ಖ್ಯಾತ ನಟ ಮಮ್ಮೂಟ್ಟಿ ಆ ವ್ಯಕ್ತಿ ಜತೆ ನಡೆದುಕೊಂಡ ರೀತಿ ನೋಡಿದ್ರೆ ಶಾಕ್

Show comments