ಕುಮಾರಣ್ಣ ಮತ್ತೆ ಸಿಎಂ ಆಗ್ಬೇಕು: ಪೂಜಾ ಗಾಂಧಿ
ಜೆಡಿಎಸ್ ಸೇರಿ ಇನ್ನೂ ನೆಟ್ಟಗೆ ವಾರ ಆಗಿಲ್ಲ, ಆಗ್ಲೇ ರಾಜಕೀಯವನ್ನ ಇಷ್ಟೊಂದು ಜೋರಾಗಿ ಶುರು ಮಾಡ್ಕೊಂಡು ಬಿಟ್ರಾ ಅಂತಿದ್ದೀರಾ? ಅದೇನು ಬೇಕಾದ್ರೆ ಹೇಳಿ, ಅದ್ಯಾವುದನ್ನೂ ಮಳೆ ಹುಡುಗಿ ಪೂಜಾ ಗಾಂಧಿ ಕ್ಯಾರೇ ಮಾಡಲ್ಲ. ಅವರಲ್ಲಿ ಸ್ಪಷ್ಟತೆಯಿದೆ, ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರಬೇಕು ಅನ್ನೋ ಅಭಿಲಾಷೆಯಿದೆ, ಎಚ್.ಡಿ. ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಬೇಕು ಅನ್ನೋ ನಿರೀಕ್ಷೆಯೂ ಇದೆ! ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್ದುನಿಯಾಕ್ಕೆ ಭೇಟಿ ಕೊಡಿಪೂಜಾ ಗಾಂಧಿ ಪ್ರಕಾರ ಜೆಡಿಎಸ್ ಅಧಿಕಾರದಲ್ಲಿದ್ದಾಗ ರಾಜ್ಯ ಸುಭಿಕ್ಷವಾಗಿತ್ತು. ದಿನಬಳಕೆ ವಸ್ತುಗಳಂತೂ ಕೈಗೆಟಕುವಂತಿದ್ದವು. ಆದ್ರೆ ಈಗ ಪರಿಸ್ಥಿತಿ ಹಾಗಿಲ್ಲ. ಎಲ್ಲವೂ ಬದಲಾಗಿದೆ. ಅಪೌಷ್ಟಿಕತೆ ತಾಂಡವವಾಡುತ್ತಿದೆ. ಇದನ್ನೆಲ್ಲ ಹೋಗಲಾಡಿಸಲು ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರಬೇಕು. ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಬೇಕಂತೆ.ರಾಧಿಕಾ ಜತೆ ಮಾತಾಡಿಲ್ಲ...ಜೆಡಿಎಸ್ ಸೇರಿದ್ದೇನೋ ಸರಿ, ಇದೇ ಪಕ್ಷಕ್ಕೆ ಸೇರಿ ಅಂತ ಕುಮಾರಣ್ಣನ ಎರಡನೇ ಪತ್ನಿ ರಾಧಿಕಾ ಕುಮಾರಸ್ವಾಮಿ ಏನಾದ್ರೂ ಸಲಹೆ ನೀಡಿದ್ರಾ? ಈ ಪ್ರಶ್ನೆಗೆ ಪೂಜಾ ಗಾಂಧಿ ಮುಸಿ ಮುಸಿ ನಗುತ್ತಾ, ನೋ ಅಂದ್ರು. ನಂಗೆ ಸಲಹೆ ನೀಡೋದಿಕ್ಕೆ, ಮಾರ್ಗದರ್ಶನ ಮಾಡೋದಿಕ್ಕೆ ಅಪ್ಪ-ಅಮ್ಮ ಇದ್ದಾರೆ. ಬೇರೆಯವರು ಯಾಕೆ ಬೇಕು ಅಂತ ಮರು ಪ್ರಶ್ನೆ ಹಾಕಿದ್ರು.ನಾರಾಯಣ ಸ್ವಾಮಿ ಕಾರಣ...'
ಮುಂಗಾರು ಮಳೆ' ನಿರ್ಮಾಪಕ ಹಾಗೂ ಜೆಡಿಎಸ್ ನಾಯಕ ಇ. ಕೃಷ್ಣಪ್ಪ ಅವರ ಕಾರಣದಿಂದ ಪೂಜಾ ಗಾಂಧಿ ಜೆಡಿಎಸ್ ಸೇರ್ಪಡೆಗೊಂಡರು ಎಂಬ ಮಾತುಗಳು ಸುಳ್ಳಾಗಿವೆ. ಪೂಜಾರನ್ನು ಪಕ್ಷಕ್ಕೆ ಸೇರಿಸಿದ್ದು ಮಾಜಿ ಶಾಸಕ-ಸಂಸದ ನಾರಾಯಣ ಸ್ವಾಮಿಯವರಂತೆ. ಅವರು ಫ್ಯಾಮಿಲಿ ಫ್ರೆಂಡ್. ಜತೆಗೆ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ರೆಡ್ಡಿಯವರ ಸಹಕಾರವೂ ಇದೆ ಅನ್ನೋದು ಪೂಜಾ ಸ್ಪಷ್ಟನೆ.2-3
ವರ್ಷದಲ್ಲಿ ಮದುವೆ...ಸದ್ಯಕ್ಕೆ ಮದುವೆಯಾಗುವ ಯೋಚನೆಯಿಲ್ಲ. ಮಾಡೋದಿಕ್ಕೆ ಬೇಕಾದಷ್ಟು ಕೆಲಸಗಳಿವೆ. ಬಹುಶಃ ಇನ್ನು ಎರಡ್ಮೂರು ವರ್ಷದಲ್ಲಿ ನಾನು ಮದುವೆಯಾಗಬಹುದೋ, ಏನೋ. ಒಳ್ಳೆ ಹುಡುಗ ಸಿಕ್ಕಿದ್ರೆ ಕನ್ನಡಿಗನನ್ನೇ ಮದುವೆಯಾಗ್ತೇನೆ. ಈಗಾಗ್ಲೇ ಕರ್ನಾಟಕದಲ್ಲಿ ನೆಲೆಗೊಂಡಿರೋದ್ರಿಂದ ನೋಡೋಣ. ಅದೆಲ್ಲವೂ ನನ್ನ ಅಪ್ಪ-ಅಮ್ಮನಿಗೆ ಬಿಟ್ಟದ್ದು.ವೆಬ್ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!