Webdunia - Bharat's app for daily news and videos

Install App

ಅಜ್ಜಿಗೊಂದು ಕಾಲ, ರಿಷಿಕಾಗೆ ಇನ್ನೊಂದು ಕಾಲ!

Webdunia
ಸೋಮವಾರ, 9 ಜನವರಿ 2012 (11:54 IST)
SUJENDRA
ನಮ್ಮಜ್ಜಿ ಯಾವತ್ತೋ ಮಾಡಿದ ಪಾತ್ರಗಳನ್ನು ನನಗೆ ಈಗಲೂ ಮಾಡಲು ಸಾಧ್ಯವಿಲ್ಲ. ಬೀಚ್‌ನಲ್ಲಿ ಯಾವ ಧಿರಿಸು ಹಾಕಬೇಕೋ, ಅದನ್ನೇ ಹಾಕಬೇಕು. ಅದು ಬಿಟ್ಟು ಸೀರೆ ಉಡಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಡೇರಿಂಗ್ ಲುಕ್ ಮತ್ತು ಮಾತುಗಳಿಂದಲೇ ಸುದ್ದಿಯಾಗುತ್ತಿರುವ ಐಟಂ ಸ್ಪೆಷಲಿಸ್ಟ್ ರಿಷಿಕಾ ಸಿಂಗ್ ಮತ್ತೆ ಪಡ್ಡೆಗಳನ್ನು ಕೆಣಕಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ರಿಷಿಕಾ ಸಿಂಗ್ ಅಜ್ಜ-ಅಜ್ಜಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದ್ದವರು. ಅಜ್ಜಿ ಪ್ರೊತಿಮಾ ದೇವಿ ನಟಿಯಾಗಿ ಗುರುತಿಸಿಕೊಂಡಿದ್ದವರು. ಹಾಗೆಂದು ಅವರು ಅಂದು ಮಾಡಿದಂತೆ ಇಂದು ಮೊಮ್ಮಗಳು ಮಾಡಲು ಸಿದ್ಧರಿಲ್ಲ. ಗೌರಮ್ಮ ಪಾತ್ರ ನನಗೆ ಬೇಡ ಎಂದಿದ್ದಾರೆ.

' ಹಾಗೆಂದು ನಾನು ಸಭ್ಯ ಮತ್ತು ಕೌಟುಂಬಿಕ ಪಾತ್ರಗಳಿಗೆ ಹೇಳಿದ ಹುಡುಗಿಯಲ್ಲ ಅಂತ ಹೇಳುತ್ತಿಲ್ಲ. ಆದರೆ ನನ್ನಜ್ಜಿ ಮಾಡಿದ ಪಾತ್ರಗಳನ್ನು ಮಾಡಲಾರೆ. ಕಾಲ ಬದಲಾಗಿದೆ. ನನಗೆ ಸದಾ ಸಂಪ್ರದಾಯ ಮತ್ತು ಕಟ್ಟಳೆಗಳನ್ನು ಪಾಲಿಸುವುದು ಸಾಧ್ಯವಿಲ್ಲ' ಅನ್ನೋದು ರಿಷಿಕಾ ನೇರ ಮಾತು.

ರಿಷಿಕಾ ಸಿಂಗ್ ಇಷ್ಟುದ್ದ ಮಾತನಾಡಲು ಕಾರಣ, 'ಬೆಂಕಿ ಬಿರುಗಾಳಿ' ಚಿತ್ರದ ಬೀಚ್ ಸಾಂಗು. ಎಸ್.ಕೆ. ಬಶೀದ್ ನಿರ್ದೇಶನದ ಈ ಚಿತ್ರದಲ್ಲಿ ಗಜಗಾಮಿನಿ ನಮಿತಾ ಸೇರಿದಂತೆ ಆರು ಮಂದಿ ಹೀರೋಯಿನ್ನುಗಳಿದ್ದಾರೆ. ಅವರಲ್ಲಿ ರಿಷಿಕಾ ಕೂಡ ಒಬ್ಬರು.

ಈ ಚಿತ್ರದಲ್ಲಿ ಬೀಚ್ ಹಾಡೊಂದಿದೆ. ಅದರ ಬಗ್ಗೆ ಮಾತಿಗಿಳಿದ ರಿಷಿಕಾ, ತಾನು ಹಾಟ್ ಹಾಟಾಗಿ ಕಾಣಿಸಿಕೊಂಡಿದ್ದೇನೆ ಎಂದರು. ಯಾಕೆ ಪ್ರತಿ ಹಾಡಿನಲ್ಲೂ ಹೀಗೆ ಕಾಣಿಸಿಕೊಳ್ಳುತ್ತೀರಿ ಅಂತ ಪ್ರಶ್ನಿಸಿದರೆ, ಬೀಚ್ ಹಾಡಿನಲ್ಲಿ ಸೀರೆ ಉಡಲು ಸಾಧ್ಯವೇ? ನನಗಂತೂ ಅಂತಹ ಹಾಡಲ್ಲಿ ಗೌರಮ್ಮನಾಗಲು ಸಾಧ್ಯವಿಲ್ಲ ಅಂದರು.

ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಪುತ್ರಿ, ನಾಯಕ ಆದಿತ್ಯ ಸಹೋದರಿಯಾಗಿರುವ ರಿಷಿಕಾ ಇದುವರೆಗೆ ನಟಿಸಿರುವ ಚಿತ್ರಗಳು ಬೆರಳೆಣಿಕೆಯಷ್ಟು. ಮೊದಲ ಚಿತ್ರ ಕಂಠೀರವದಲ್ಲಿ ದುನಿಯಾ ವಿಜಯ್‌ಗೆ ನಾಯಕಿಯಾಗಿದ್ದರು. ಎರಡನೇ ಚಿತ್ರ ಕಳ್ಳ ಮಳ್ಳ ಸುಳ್ಳ. ಮೊನ್ನೆಯಷ್ಟೇ ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ 'ಕಠಾರಿ ವೀರ ಸುರ ಸುಂದರಾಂಗಿ' ಚಿತ್ರದ ಐಟಂ ಸಾಂಗ್ ಒಂದರಲ್ಲಿ ಕುಣಿದು ಬಂದಿದ್ದಾರೆ. ಮುಸ್ಸಂಜೆ ಮಹೇಶ್ ನಿರ್ದೇಶನದ ರಮೇಶ್ ನಾಯಕರಾಗಿರುವ ತುಂತುರು ಚಿತ್ರದಲ್ಲಿ ತಂಗಿಯ ಪಾತ್ರ.

ಬೆಂಕಿ ಬಿರುಗಾಳಿಯಲ್ಲಿ ರಿಷಿಕಾ ಅಭಿನಯಕ್ಕೆ ಭೇಷ್ ಅಂದಿರುವ ನಿರ್ದೇಶಕ-ನಿರ್ಮಾಪಕ ಬಶೀದ್ ಈಗ ಅವರ ಇನ್ನೊಂದು ಚಿತ್ರಕ್ಕೂ ಬೇರೆ ನಾಯಕಿಯನ್ನು ಹುಡುಕಲು ಹೋಗಿಲ್ಲ. ರಿಷಿಕಾರನ್ನೇ ಹಾಕಿಕೊಂಡಿದ್ದಾರೆ. ಆ ಚಿತ್ರ ದ್ವಿಭಾಷೆಯಲ್ಲಿ ಬರಲಿರುವುದು ವಿಶೇಷ. ರಿಷಿಕಾಗಂತೂ ಇದು ಡಬ್ಬಲ್ ಧಮಾಕಾ.

ಇಷ್ಟಾದರೂ ಅಪ್ಪನ ನಿರ್ದೇಶನದ ಚಿತ್ರದಲ್ಲಿ ನಟಿಸುವ ಕನಸು ಇನ್ನೂ ಈಡೇರಿಲ್ಲ. ಅದಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದೇನೆ ಅನ್ನುತ್ತಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments