ತೆಲುಗಿನ ಖ್ಯಾತ ನಿರ್ದೇಶಕ ಎಸ್.ಕೆ.ಬಶೀರ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಹೊಸ ಚಿತ್ರದಲ್ಲಿ ಕನ್ನಡದ ಕುವರಿ ರಿಷಿಕಾ ಸಿಂಗ್ ಮಾದಕವಾಗಿ ಸೀರೆಯುಟ್ಟು ಪಡ್ಡೆ ಹುಡುಗರನ್ನು ಬುಟ್ಟಿಗೆ ಹಾಕುತ್ತೇನೆ ಎನ್ನುತ್ತಿದ್ದಾರೆ.
' ಕಂಠೀರವ' ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಸಣ್ಣ ಮಕ್ಕಳಂತೆ ಕಾಣಲು ತುಂಡು ಬಟ್ಟೆ ಉಟ್ಟುಕೊಂಡು ಬಂದಿದ್ದ ರಿಷಿಕಾ ಸಿಂಗ್ರನ್ನು ನೋಡಿದ ಜನರೆಲ್ಲಾ ಹೀಗೂ ಉಂಟೇ ಎಂದು ಹುಬ್ಬೇರಿಸಿದ್ದರು.
ಪರಭಾಷಾ ನಟಿಯರಿಗಿಂತ ನಾವು ಯಾವುದರಲ್ಲೂ ಕಡಿಮೆಯಿಲ್ಲ ಎಂಬುದನ್ನು ಸಾಬೀತುಪಡಿಸಲು ಈ ರೀತಿಯೆಲ್ಲಾ ನಟಿಸುತ್ತಿದ್ದೇನೆ ಎಂಬುದು ರಿಷಿಕಾ ಸಿಂಗ್ ಉವಾಚ. ಪಾತ್ರಕ್ಕೆ ಒಪ್ಪುವಂತಾ ಯಾವ ವೇಷವಾದರೂ ತೊಡಲು ಮುಜುಗರವೇನಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಡರ್ಟಿ ಪಿಚ್ಚರ್ನಲ್ಲಿ ವಿದ್ಯಾಬಾಲನ್ ಸೀರೆಯುಟ್ಟು ಮಾದಕವಾಗಿ ಕಂಡಿದ್ದನ್ನು ನೋಡಿ ಎಚ್ಚೆತ್ತುಕೊಂಡ ಯುವತಿಯರು ಕೂಡ ತುಂಡು ಬಟ್ಟೆ ಬಿಟ್ಟು ಸೀರೆ ಸಹವಾಸ ಮಾಡತೊಡಗಿದ್ದಾರೆ. ಸೀರೆ ಬೆಲೆ ಕೂಡ ಮೆಲ್ಲ ಮೆಲ್ಲಗೆ ಹೆಚ್ಚುತ್ತಿದೆ. ಇದರಿಂದ ವಿವಾಹಿತ ಪುರುಷರಿಗೆ ಚೆಂಬೋ ಚೆಂಬು ಪರಿಸ್ಥಿತಿ ಎದುರಾಗಿದೆ ಎನ್ನುತ್ತಿದ್ದಾರೆ ಪಡ್ಡೆ ಹುಡುಗ್ರು.
ಅಂದಹಾಗೆ, ರಿಷಿಕಾ ಸಿಂಗ್ಗೆ ನಟಿ ಮಾಲಾಶ್ರೀ ಅಂದರೆ ತುಂಬಾ ಇಷ್ಟವಂತೆ. ಅದರಲ್ಲೂ ಅವರ ಸಾಹಸಮಯ ಚಿತ್ರಗಳು ಇಂದಿಗೂ ಕಣ್ಣಮುಂದೆ ಹರಿದಾಡುತ್ತದೆಯಂತೆ. ಛೇ! ಎತ್ತಲಿಂದೆತ್ತ ಸಂಬಂಧವಯ್ಯಾ!