ಅಜಾತ ಶತ್ರು ಸಾಹಸ ಸಿಂಹ ವಿಷ್ಣುವರ್ಧನ್ ನಮ್ಮನ್ನಗಲಿ ಇಂದಿಗೆ (ಡಿ. 30 ಶುಕ್ರವಾರ) ಎರಡು ವರ್ಷ ಸಂದಿದೆ. ರಾಜ್ಯದಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರೂ, ನಿರ್ಮಾಪಕ, ನಿರ್ದೇಶಕರಿಗಿಂತಲೂ ತಾನು ಶ್ರೀಮಂತನಾಗಿದ್ದರೂ, ಚಿತ್ರೀಕರಣದಲ್ಲಿ ಭಾಗವಹಿಸುವ ವೇಳೆ ಒಬ್ಬ ಸಾಮಾನ್ಯ ಕಲಾವಿದನಂತೆ ಭಾಗವಹಿಸುತ್ತಿದ್ದರು.ಮಿಗಿಲಾಗಿ ತನ್ನನ್ನು ನಂಬಿ ಹಣ ಸುರಿಯುವ ನಿರ್ಮಾಪಕರಿಗೆ ನಷ್ಟವಾಗಬಾರದು ಎಂಬ ಜವಾಬ್ದಾರಿಯಿಂದ ನಟಿಸುತ್ತಿದ್ದರು ಎಂದು ಈಗಲೂ ಗಾಂಧಿನಗರದ ಮಂದಿ ಆಡಿಕೊಳ್ಳುತ್ತಿದ್ದಾರೆ.
ಅವರ ಚಿರ ನೆನೆಪಿಗಾಗಿ ಅನ್ನ ಸಂತರ್ಪಣೆ ಕಾರ್ಯ ಹಮ್ಮಿಕೊಂಡಿದ್ದಾರೆ ಪತ್ನಿ ಭಾರತೀ ವಿಷ್ಣು ವರ್ಧನ್. ಜತೆಗೆ ರಕ್ತದಾನ ಶಿಬಿರ, ವಯಸ್ಸಾಗಿರುವ ಬಡವರಿಗೆ ಅನುಭವಿ ವೈದ್ಯರಿಂದ ಉಚಿತ ಆರೋಗ್ಯ ತಪಾಸನಾ ಶಿಬಿರವನ್ನು ನಡೆಸಲಾಗುತ್ತಿದೆ.
ವಿಷ್ಣು ವರ್ಧನ್ ಹೆಸರಿನಲ್ಲಿ ಕ್ಯಾಲೆಂಡರ್, ಬೆಳ್ಳಿ ನಾಣ್ಯ, ವಾಚ್ ಬಿಡುಗಡೆ ಮಾಡಲಾಗಿದೆ. ಅವರ ಪುಣ್ಯ ತಿಥಿಯಲ್ಲಿ ವಿಷ್ಣು ಆಪ್ತರಾದ ಕಲಾ ಸಾಮ್ರಾಟ್ ಎಸ್.ನಾರಾಯಣ್ ಹಾಗೂ ರಾಜ್ಯದ ಹಲವಾರು ಅಭಿಮಾನಿ ಬಳಗ, ಸ್ನೇಹ ಲೋಕ ಕ್ರಿಕೆಟ್ ತಂಡದ ಸದಸ್ಯರು ಹಾಜರಿದ್ದರು.