' ವಿಷ್ಣುವರ್ಧನ್' ಚಿತ್ರವನ್ನು ವಿವಾದಗಳ ಸುಳಿಗೆ ಸಿಲುಕಿಸಿ ಪ್ರಚಾರ ಪಡೆದಿದಕ್ಕೆ ಸಾರ್ಥಕವಾಗಿದೆ. ನಿರ್ಮಾಪಕ ದ್ವಾರಕೀಶ್ ದಿಲ್ಖುಷ್ ಆಗಿದ್ದಾರೆ. ಅವರ ಜೇಬು ತುಂಬಿ ತುಳುಕಾಡುತ್ತಿದೆ. ಒಂದೇ ವಾರದಲ್ಲಿ 'ವಿಷ್ಣುವರ್ಧನ' ಗಳಿಸಿದ ಸಂಪಾದನೆ ಬರೋಬ್ಬರಿ ಆರು ಕೋಟಿ! ಎಲ್ಲದಕ್ಕೂ ನಟ ಸುದೀಪ್ ಕಾರಣ ಎಂದಿದ್ದಾರೆ ಕಿಲಾಡಿ ಕುಳ್ಳ ದ್ವಾರ್ಕಿ.
ವಿವಾದಾಸ್ಪದ ವಿಷಯಗಳೇನು 'ವಿಷ್ಣುವರ್ಧನ್' ಚಿತ್ರದಲ್ಲಿಲ್ಲ. ಪರಭಾಷಾ ಮಸಾಲ ಚಿತ್ರಗಳಿಗೂ ಪ್ರಬಲ ಪೈಪೋಟಿ ನೀಡುವಂತಿದೆ. ಮತ್ತೊಂದು ವಿಶೇಷ ಅಂದ್ರೆ ಸುದೀಪ್ ಸ್ಟೈಲ್ ಎಲ್ಲರನ್ನೂ ಆಕರ್ಷಿಸುತ್ತದೆ. ನಟನೆಯಲ್ಲಿ ದೂಸ್ರಾ ಮಾತಿಲ್ಲಬಿಡಿ.
ಭಾವನಾ ಮೆನನ್ ಖುಷಿ ಖುಷಿಯಾಗಿ ನಟಿಸಿದ್ದರೆ, ಪ್ರಿಯಾಮಣಿ ಉಸಿರು ಬಿಗಿ ಹಿಡಿದು ನಾಮುಂದು ತಾಮುಂದು ಎಂಬಂತೆ ನಟಿಸಿದ್ದಾರೆ. ಅದೂ ಚಿತ್ರದ ಪ್ಲಸ್ ಪಾಯಿಂಟ್ ಎನ್ನುತ್ತಿವೆ ವಿಮರ್ಶೆಗಳು.
ಒಟ್ಟಾರೆಯಾಗಿ ಚಲನ ಚಿತ್ರವೊಂದನ್ನು ಅಚ್ಚುಕಟ್ಟಾಗಿ ನಿರ್ಮಿಸಿದರೆ ಅದು ನಿರ್ಮಾಪಕರ ಜೇಬು ತುಂಬಿಸುತ್ತದೆ ಎಂಬುದಕ್ಕೆ ವಿಷ್ಣುವರ್ಧನ ಉತ್ತಮ ಉದಾಹರಣೆ. ಆದರೆ ಚಿತ್ರದ ಹೆಸರಿನಲ್ಲೂ ಸ್ವಲ್ಪ ತೂಕವಿರಬೇಕಷ್ಟೆ.