Webdunia - Bharat's app for daily news and videos

Install App

ಅಪಘಾತ: ಬಾಂಡ್ ಹುಡುಗಿ ಪ್ರಿಯಾಮಣಿ ಎಸ್ಕೇಪ್

Webdunia
SUJENDRA
ನಾಯಕ ಅಥವಾ ನಾಯಕಿ ಕೊಂಚವೇ ಅಪಾಯಕಾರಿ ಸನ್ನಿವೇಶದಲ್ಲಿ ಪಾಲ್ಗೊಂಡರೂ ಅಥವಾ ಏನಾದರೂ ಸಣ್ಣಪುಟ್ಟ ಗೀರು ಗಾಯಗಳಾದರೂ ಬ್ರೇಕಿಂಗ್ ನ್ಯೂಸ್ ಮಾಡುವ ನಿರ್ಮಾಪಕ-ನಿರ್ದೇಶಕರಿಗೆ ಗಾಂಧಿನಗರದಲ್ಲಿ ಕೊರತೆಯಿಲ್ಲ. ಆದರೆ ಬಾಂಡ್ ಹುಡುಗಿ ಪ್ರಿಯಾಮಣಿ ಮಾತ್ರ ಸುದ್ದಿಯ ಗೋಜಿಗೆ ಹೋಗದೆ, ಬದುಕಿ ಬಂದಿರುವುದನ್ನಷ್ಟೇ ಖುಷಿಯಿಂದ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಆಗಿರುವುದಿಷ್ಟು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಾಯಕರಾಗಿರುವ, ದುನಿಯಾ ಸೂರಿ ನಿರ್ದೇಶನದ 'ಅಣ್ಣಾ ಬಾಂಡ್' ಚಿತ್ರದ ಶೂಟಿಂಗ್‌ಗಾಗಿ ಚಿತ್ರತಂಡ ಬೆಂಗಳೂರಿನಿಂದ ಮುತ್ತತ್ತಿ ಕಾಡಿನತ್ತ ಹೊರಟಿತ್ತು. ಈ ದಾರಿಯಲ್ಲಿ ಸಾಗುವಾಗ ಅಪಘಾತವೊಂದು ನಡೆದಿದೆ.

ಪ್ರಿಯಾಮಣಿ ಸೇರಿದಂತೆ ಡ್ರೈವಿಂಗ್ ಮಾಡುತ್ತಿದ್ದವರು ಮತ್ತು ಚಿತ್ರತಂಡ ಇದರಿಂದ ಸ್ವಲ್ಪದರಲ್ಲೇ ಎಸ್ಕೇಪ್ ಆಗಿತ್ತು. ಕಾರಿನ ಆಚೀಚೆ ಬದಿಗಳು ಮಾತ್ರ ಹಾನಿಗೊಂಡಿದ್ದವು. ಥಾಂಕ್ ಗಾಡ್, ಹೋದ ಜೀವ ಬಂದಂತಾಯಿತು ಎಂದಿದ್ದಾರೆ ಮಲಯಾಳಿ ಹುಡುಗಿ.

' ಜಾಕಿ' ಜಯಭೇರಿಯ ನಂತರ ಪುನೀತ್-ಸೂರಿ ಕಾಂಬಿನೇಷನ್ ಪುನರಾವರ್ತನೆಯಾಗುತ್ತಿರುವ ಚಿತ್ರವಿದು. ಇದೇ ಕಾರಣದಿಂದ ನಿರೀಕ್ಷೆಯೂ ಜೋರಾಗಿದೆ. ಪುನೀತ್ ಸಿಕ್ಸ್ ಪ್ಯಾಕ್ ಪ್ರದರ್ಶನ ಮಾಡಲಿರುವ ಚಿತ್ರದಲ್ಲಿ ನಿಧಿ ಸುಬ್ಬಯ್ಯ ಕೂಡ ನಾಯಕಿ.

ಈ ನಡುವೆ ಪ್ರಿಯಾಮಣಿ ನಾಯಕಿಯಾಗಿರುವ ಸುದೀಪ್ 'ವಿಷ್ಣುವರ್ಧನ' ಚಿತ್ರ ಇದೇ ಗುರುವಾರ ಬಿಡುಗಡೆಯಾಗುತ್ತಿದೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments