Select Your Language

Notifications

webdunia
webdunia
webdunia
webdunia

ರವಿ ಶ್ರೀವತ್ಸರಿಂದ ರವಿಮಾಮನಿಗೆ 'ದಶಮುಖ'

ರವಿ ಶ್ರೀವತ್ಸರಿಂದ ರವಿಮಾಮನಿಗೆ 'ದಶಮುಖ'
SUJENDRA
ಕ್ರೇಜಿ ಸ್ಟಾರ್ ರವಿಚಂದ್ರನ್ ಎಲ್ಲಾದರೂ ಪೌರಾಣಿಕ ಪಾತ್ರದಲ್ಲಿ ನಟಿಸುತ್ತಿದ್ದಾರೆಯೇ ಎಂದು ಹುಬ್ಬೇರಿಸುವ ಅಗತ್ಯವೇ ಇಲ್ಲ. ಅಂತಹ ಸಣ್ಣ ಯೋಚನೆಯನ್ನೂ ಸದ್ಯದ ಮಟ್ಟಿಗೆ ಬಿಡಿ, ಮುಂದೆಂದೂ ಮಾಡುವ ಪ್ರಶ್ನೆಯೇ ಉದ್ಭವಿಸಲಾರದು. ಹಾಗಿದ್ದರೆ ಇದು ಇನ್ನೊಂದು ಮಸಾಲೆ ಚಿತ್ರವೇ? ಹೌದು, ಹೆಸರು ಮಾತ್ರ 'ದಶಮುಖ'. ಸಿನಿಮಾದಲ್ಲಿ ಅದೇ ಮುಖವನ್ನು ನೋಡಬೇಕು!

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಸದಾ ಹಾಟ್ ಸಬ್ಜೆಕ್ಟ್‌‌ಗಳನ್ನು ಹೆಕ್ಕುವುದರಲ್ಲಿ ಪರಿಣತಿ ಪಡೆದಿರುವ ರವಿ ಶ್ರೀವತ್ಸ 'ದಶಮುಖ'ದ ಸಾರಥಿ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕತ್ವದ ವಿವಾದಕ್ಕೆ ಸಿಲುಕಿರುವ 'ವರದ'ನನ್ನು ಬದಿಗಿಟ್ಟು ಈ ಚಿತ್ರವನ್ನು ನಿರ್ಮಿಸಲು ಹೊರಟಿರುವುದು ಸೂರಪ್ಪ ಬಾಬು.

ವಾಸ್ತವದಲ್ಲಿ ಈ ಚಿತ್ರಕ್ಕೂ, ರಾಮಾಯಣದ ರಾವಣನಿಗೂ ಯಾವುದೇ ಸಂಬಂಧವಿಲ್ಲ. ಆದರೆ ಸದಾ ವಿವಾದಗಳನ್ನೇ ಹುಡುಕುವ ನಿರ್ದೇಶಕ ರವಿ ಶ್ರೀವತ್ಸ ಪ್ರಕಾರ, ಈ ಚಿತ್ರ ನಿಂತಿರುವುದೇ ರಾವಣನ ಮೇಲೆ. ಆತನ ಸಕಲ ಗುಣಗಳನ್ನಿಟ್ಟುಕೊಂಡೇ ಚಿತ್ರ ಮಾಡುತ್ತಿದ್ದಾರಂತೆ.

'ದಶಮುಖ'ದ ಮೂಲಕ ಹಿರಿಯ ನಟಿ ಸರಿತಾ ಕನ್ನಡಕ್ಕೆ ಮರಳುತ್ತಿರುವುದು ವಿಶೇಷ. ಅನಂತ್ ನಾಗ್, ದೇವರಾಜ್, ಜುಗಾರಿ ಅವಿನಾಶ್, ಅವಿನಾಶ್, ಮಾಳವಿಕಾ, ಕಿಶೋರ್, ಅಚ್ಯುತ ರಾವ್ ಮುಂತಾದವರ ತಾರಾಗಣ ಚಿತ್ರಕ್ಕಿದೆ.

ವಿ. ಹರಿಕೃಷ್ಣ ಸಂಗೀತ, ಮ್ಯಾಥ್ಯೂ ಕ್ಯಾಮರಾ, ಅರುಣ್ ಸಾಗರ್ ಕಲಾ ನಿರ್ದೇಶನ ಖಚಿತ. ರವಿಮಾಮನಿಗೆ ನಾಯಕಿ ಯಾರೆಂದು ಇನ್ನೂ ನಿರ್ಧಾರವಾಗಿಲ್ಲ. ಕೆಲವೇ ದಿನಗಳಲ್ಲಿ ಆಯ್ಕೆ ಪ್ರಕ್ರಿಯೆಯೂ ನಡೆಯಲಿದೆ.

ಬಿಗ್ ಬಜೆಟ್ ಚಿತ್ರ ಎಂದು ಸ್ವತಃ ಸೂರಪ್ಪ ಬಾಬು ಹೇಳಿದ್ದಾರೆ. ಈಗಾಗಲೇ ರಾಕ್‌ಲೈನ್ ಸ್ಟುಡಿಯೋದಲ್ಲಿ ಬೃಹತ್ ಸೆಟ್ ಹಾಕಲಾಗುತ್ತಿದೆ. ಡಿಸೆಂಬರ್ 12ರಿಂದಲೇ ಚಿತ್ರೀಕರಣ ಆರಂಭ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada