Select Your Language

Notifications

webdunia
webdunia
webdunia
webdunia

ಕೇರಳದಲ್ಲಿ ರಾಫೆಲ್ ಜತೆ ರಮ್ಯಾ ಬರ್ತ್‌ಡೇ ಗಮ್ಮತ್ತು

ಕೇರಳದಲ್ಲಿ ರಾಫೆಲ್ ಜತೆ ರಮ್ಯಾ ಬರ್ತ್‌ಡೇ ಗಮ್ಮತ್ತು
SUJENDRA
ಈ ಬಾರಿಯ ಹುಟ್ಟುಹಬ್ಬದಲ್ಲಿ ವಿಶೇಷವೇನಿಲ್ಲ ಎಂದು ಮೊನ್ನೆ ತಾನೇ ಹೇಳಿಕೊಂಡಿದ್ದ ಲಕ್ಕಿ ಸ್ಟಾರ್ ರಮ್ಯಾ ತನ್ನ ಪ್ರಿಯಕರ ರಾಫೆಲ್ ಜತೆ ಕೇರಳಕ್ಕೆ ಹೋಗಿದ್ದಾರಂತೆ. ಹಾಗಂತ ಸ್ವತಃ ಆಕೆಯೇ ತಿಳಿಸಿದ್ದಾರೆ. ಬರ್ತ್‌‌ಡೇಯನ್ನು ಅಲ್ಲೇ ಆಚರಿಸಿರುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ನವೆಂಬರ್ 29ರಂದು 29ನೇ ವರ್ಷಕ್ಕೆ ಕಾಲಿಟ್ಟ ರಮ್ಯಾ ಹುಟ್ಟುಹಬ್ಬ ಈ ಬಾರಿ ಎಲ್ಲಿ ಆಚರಿಸುತ್ತಾರೆ ಎಂಬ ಪ್ರಶ್ನೆ ಹಲವು ದಿನಗಳಿಂದ ಸುತ್ತಾಡುತ್ತಿತ್ತು. ಇದಕ್ಕೆ ಸೋಮವಾರದವರೆಗೂ ರಮ್ಯಾ ಉತ್ತರಿಸಿರಲಿಲ್ಲ. ರಹಸ್ಯ ಸ್ಥಳವೊಂದಕ್ಕೆ ಹೋಗುತ್ತಿದ್ದೇನೆ, ಇದು ಸರ್‌ಪ್ರೈಜ್ ಎಂದಷ್ಟೇ ಹೇಳಿಕೊಂಡಿದ್ದರು.

ಆದರೆ ಲಕ್ಕಿಸ್ಟಾರ್ 29ರ ಸಂಜೆ ಹೊತ್ತಿಗೆ ತನ್ನ ಗೆಳೆಯ ರಾಫೆಲ್ ಜತೆ ಕೇರಳದ ಕುಮಾರಕೋಮ್‌ಗೆ ಹೋಗಿದ್ದಾರೆ. ಅಲ್ಲಿಂದಲೇ ತನ್ನ ಅಭಿಮಾನಿಗಳಿಗೆ ಫೇಸ್‌ಬುಕ್ ಮೂಲಕ ಸಂದೇಶವನ್ನೂ ರವಾನಿಸಿದ್ದಾರೆ. ಪ್ರೀತಿಯಿಂದ ಹಾರೈಸಿದ ಲಕ್ಷಾಂತರ ಮಂದಿಯನ್ನು ನೆನಪಿಸಿಕೊಂಡಿದ್ದಾರೆ.

ಹುಟ್ಟುಹಬ್ಬದ ರಾತ್ರಿಯನ್ನು ಕೇರಳದ ಸುಂದರ ಪ್ರವಾಸಿ ತಾಣದಲ್ಲಿ ಗೆಳೆಯ ರಾಫೆಲ್ ಜತೆ ಕಳೆದಿರುವ ಅವರು, ಅಲ್ಲಿಂದಲೇ ಹೈದರಾಬಾದಿಗೆ ಹೋಗಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ನಾಯಕರಾಗಿರುವ 'ಕಠಾರಿ ವೀರ ಸುರ ಸುಂದರಾಂಗಿ' ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.

ಈ ನಡುವೆ ಸಂಭಾವನೆ ಕಿರಿಕ್ ವಿವಾದಗಳಿಗೂ ರಮ್ಯಾ ಉತ್ತರಿಸಿದ್ದಾರೆ.

ನಿಮ್ಮ ಜತೆ ಆರಂಭಿಕ ಮಾತುಕತೆ ನಡೆಸಿದ ನಂತರ, ತಮ್ಮ ಚಿತ್ರದಲ್ಲಿ ರಮ್ಯಾ ನಾಯಕಿಯಾಗುವ ಸಾಧ್ಯತೆಗಳಿವೆ ಎಂದು ನಿರ್ಮಾಪಕರು ಹೇಳುತ್ತಾರೆ. ಆದರೆ ನೀವು ಬಳಿಕ ಆ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಹೇಳುತ್ತೀರಿ. ಅಲ್ಲದೆ, ಆ ನಿರ್ಮಾಪಕರನ್ನು ಕೆಟ್ಟ ದೃಷ್ಟಿಯಿಂದ ನೋಡಲಾರಂಭಿಸುತ್ತೀರಿ ಎಂಬ ಆರೋಪಗಳಿವೆಯಲ್ಲ ಎಂದು ಪತ್ರಕರ್ತರು ಪ್ರಶ್ನಿಸಿದ್ದರು.

ಅದು ನಿಜವಲ್ಲ. ಎಲ್ಲವನ್ನೂ ಹಣದಿಂದಲೇ ಅಳೆಯಲಾಗದು. ನಾನು ಈ ಹಿಂದೆ ಹಲವು ಚಿತ್ರಗಳಲ್ಲಿ ಸಂಭಾವನೆ ಪಡೆಯದೆ ಅತಿಥಿ ಪಾತ್ರಗಳಲ್ಲಿ ನಟಿಸಿದ ಉದಾಹರಣೆಗಳಿವೆ. ಆದರೆ ನನ್ನ ಅನುಮತಿಯಿಲ್ಲದೆ, ಚಿತ್ರವೊಂದರ ಜತೆ ಸಂಬಂಧ ಕಲ್ಪಿಸುವುದು ನನಗೆ ಹಿಡಿಸುವುದಿಲ್ಲ. ಇನ್ನು ನಾನು ಅವರ (ನಿರ್ಮಾಪಕರ) ಚಿತ್ರಗಳಲ್ಲಿ ನಟಿಸಬೇಕೆಂದಾದರೆ, ಅವರು ನನಗೆ ಅಗತ್ಯ ಸಂಭಾವನೆ ಕೊಡಲೂ ಸಿದ್ಧರಿರಬೇಕು" ಎಂದು ರಮ್ಯಾ ಬಾಯ್ಮುಚ್ಚಿಸಿದ್ದಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada