Select Your Language

Notifications

webdunia
webdunia
webdunia
webdunia

ಆನಂದ್ ಜಸ್ಟ್ ಫ್ರೆಂಡ್, ಸಂಬಂಧ ಸುಳ್ಳು: ರಮ್ಯಾ

ಆನಂದ್ ಜಸ್ಟ್ ಫ್ರೆಂಡ್, ಸಂಬಂಧ ಸುಳ್ಳು: ರಮ್ಯಾ
PR
ವಾಹಿನಿಯೊಂದರ ಜನಪ್ರಿಯ ನಿರೂಪಕ ಕಮ್ ನಟ ಆನಂದ್ ಜತೆಗಿನ ಅಕ್ರಮ ಸಂಬಂಧ ವಿವಾದ ಕುರಿತು ನಟಿ ರಮ್ಯಾ ಬಾರ್ನಾ ಕೊನೆಗೂ ಬಾಯ್ಬಿಟ್ಟಿದ್ದಾರೆ. ಆನಂದ್ ಮತ್ತು ನಾನು ಜಸ್ಟ್ ಫ್ರೆಂಡ್ಸ್ ಆಗಿದ್ದೆವು, ಅಷ್ಟಕ್ಕೆ ಜನ ಏನೇನೋ ಕಥೆ ಕಟ್ಟಿಬಿಟ್ಟರು ಅಂತ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಹಾಗೆ ನೋಡಿದರೆ ರಮ್ಯಾ ಬಾರ್ನಾ ಈ ಹಿಂದೆ ಯಾವತ್ತೋ ಸ್ಪಷ್ಟನೆ ನೀಡಬೇಕಿತ್ತು. ಆದರೆ ಪ್ರತಿ ಬಾರಿಯೂ ನುಣುಚಿಕೊಂಡು ಬರುತ್ತಿದ್ದರು. ಉತ್ತರಿಸಲು ನಿರಾಕರಿಸುತ್ತಿದ್ದರು. ಈ ಬಗ್ಗೆ ಈಗ ಪತ್ರಿಕೆಯೊಂದರ ಜತೆ ಮಾತನಾಡಿರುವ ಅವರು, ಆರೋಪಗಳು ನಿಜವಲ್ಲ ಎಂದಿದ್ದಾರೆ.

ಖಾಸಗಿ ವಾಹಿನಿಯೊಂದರಲ್ಲಿ ನಿರೂಪಕನಾಗಿದ್ದ ಆನಂದ್, 'ನನ್ನೆದೆಯ ಹಾಡು' ಚಿತ್ರದ ಮೂಲಕ ನಾಯಕನಾಗಿದ್ದರು. ಇದಕ್ಕೆ ರಮ್ಯಾ ಬಾರ್ನಾ ನಾಯಕಿ. ಹೀಗಿದ್ದವರ ನಡುವೆ ಪ್ರೇಮಾಂಕುರವಾಗಿತ್ತು. ವಿವಾಹಿತನಾಗಿದ್ದರೂ ಆನಂದ್ ನಟಿಯ ಜತೆ ಅನೈತಿಕ ಸಂಬಂಧ ಹೊಂದಿದ್ದರು ಎಂದು ಆರೋಪಿಸಲಾಗಿತ್ತು. ಸ್ವತಃ ಆನಂದ್ ಪತ್ನಿ ಭರಣಿ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ಆನಂದ್ ತನಗೆ ವರದಕ್ಷಿಣೆ ಕಿರುಕುಳ ಮತ್ತು ದೌರ್ಜನ್ಯ ಎಸಗುತ್ತಿದ್ದಾರೆ, ಇದಕ್ಕೆ ಕಾರಣ ನಟಿ ರಮ್ಯಾ ಬಾರ್ನಾ ಅಂತ ಅವರ ವಿರುದ್ಧವೂ ಆರೋಪ ಮಾಡಿದ್ದರು.

ಪರಿಣಾಮ 2010ರ ಮೇ ತಿಂಗಳಲ್ಲಿ ಆನಂದ್‌ರನ್ನು ಪೊಲೀಸರು ಬಂಧಿಸಿದ್ದರು. ಇತ್ತ ರಮ್ಯಾ ಬಾರ್ನಾ ಕೂಡ ಸಂಕಷ್ಟಕ್ಕೆ ಸಿಲುಕಿದ್ದರು. ಹಾಗೂ ಹೀಗೂ ನಿರೀಕ್ಷಣಾ ಜಾಮೀನು ಪಡೆದುಕೊಂಡು ಅವರು ಬಚಾವ್ ಆಗಿದ್ದರು.

ಇವೆಲ್ಲ ಮುಗಿದು ಹೋಗಿ ಒಂದೂವರೆ ವರ್ಷಗಳೇ ಕಳೆದಿವೆ. ಈಗ ಹಳೆಯದನ್ನು ಬಾರ್ನಾ ಮೆಲುಕು ಹಾಕಿದ್ದಾರೆ. ತಪ್ಪೇ ಮಾಡದೆ ತಾನು ಬಲಿಪಶುವಾದೆ ಎಂದು ಅಲವತ್ತುಕೊಂಡಿದ್ದಾರೆ.

ನಾನು ಎಲ್ಲರ ಜತೆಗೂ ಫ್ರೆಂಡ್ಲಿಯಾಗಿರುವ ಹುಡುಗಿ. ಅದೇ ರೀತಿ ಆನಂದ್ ಜತೆಗೂ ಇದ್ದೆ. ಸಿನಿಮಾ ಮುಗಿದ ನಂತರವೂ ಅವರ ಜತೆ ಸಂಪರ್ಕದಲ್ಲಿದ್ದೆ. ಅಷ್ಟಕ್ಕೆ ಏನೆಲ್ಲ ಕಥೆ ಕಟ್ಟಿದರು. ಸುಖಾ ಸುಮ್ಮನೆ ಸಂಬಂಧ ಕಲ್ಪಿಸಿದರು. ಆರೋಪಗಳು ನಿಜವಲ್ಲ. ನಾನು ಅಂತಹ ಹುಡುಗಿಯಲ್ಲ. ಆನಂದ್ ಜತೆ ನಾನು ಸಿನಿಮಾ ಮಾಡಿದ್ದೇ ತಪ್ಪಾ ಎಂದೂ ಕೊಡಗಿನ ಬೆಡಗಿ ಪ್ರಶ್ನಿಸಿದ್ದಾರೆ.

ಇವೆಲ್ಲದರಿಂದಾಗಿ ಒಂದಷ್ಟು ಹೆಸರು ಕೆಡಿಸಿಕೊಂಡ ರಮ್ಯಾ ಬಾರ್ನಾ, ಈಗ ಹಿಂದಿಗಿಂತ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿರುವುದು ವಿಶೇಷ. ಕನ್ನಡ ಚಿತ್ರರಂಗದ ಬ್ಯುಸಿ ನಟಿಯರಲ್ಲೊಬ್ಬರಾಗಿರುವಷ್ಟು ಈಗ ಬೆಳೆದಿದ್ದಾರೆ. ಆದರೂ ತಾನು ನಾಯಕಿಯಾಗಿ ಸೂಪರ್ ಹಿಟ್ ಆದ ತುಳು ಚಿತ್ರ 'ಒರಿಯರ್ದೊರಿ ಅಸಲ್' ತನ್ನ ಅದೃಷ್ಟದ ಬಾಗಿಲು ಎಂಬುದನ್ನು ಹೇಳಲು ಮರೆಯುವುದಿಲ್ಲ. ಜತೆಗೆ ಪಂಚರಂಗಿ, ಹುಡುಗರು, ಲೈಫು ಇಷ್ಟೇನೆ ತನಗೆ ಮೈಲೇಜ್ ಕೊಟ್ಟಿದೆ, ಅದರಿಂದಾಗಿ ಪರಭಾಷೆಗಳಲ್ಲೂ ಅವಕಾಶ ಪಡೆದಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada